Webdunia - Bharat's app for daily news and videos

Install App

ಟ್ರೇನ್‌ನಲ್ಲಿ ಸೀಟ್‌ಗಾಗಿ ಜಗಳ: ವ್ಯಾಪಾರಿಯನ್ನು ಎತ್ತಿ ಹೊರಕ್ಕೆಸೆದ ಕ್ರೂರಿಗಳು

Webdunia
ಶನಿವಾರ, 23 ಆಗಸ್ಟ್ 2014 (09:40 IST)
ಸದಾ ತುಂಬಿ ತುಳುಕುವ ನಮ್ಮ ದೇಶದ ಬಸ್, ಟ್ರೇನ್‌ಗಳಲ್ಲಿ ಸೀಟ್‌ಗಾಗಿ ಜಗಳ ಸಾಮಾನ್ಯವಾದುದು.  ಪಶ್ಚಿಮಬಂಗಾಳದ ವ್ಯಾಪಾರಿಯೊಬ್ಬನನ್ನು ಕೆಲವು ಪ್ರಯಾಣಿಕರು ರೇಲ್ವೇಯಿಂದ ಎತ್ತಿ ಹೊರಕ್ಕೆಸೆದ ಪರಿಣಾಮ  ಅವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮುಜಫ್ಪರ್‌ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಸೀಟ್‌ಗಾಗಿ ಜಗಳವಾಗಿತ್ತು ಎಂದು ತಿಳಿದುಬಂದಿದೆ. 


 
ರೇಲ್ವೇ ಪೋಲಿಸರ ಪ್ರಕಾರ ಶೇಖ್ ರಹಮತುಲ್ಲಾ ಎಂಬ ವ್ಯಾಪಾರಿ ದೆಹಲಿಯಿಂದ ಅಮೃತಸರ್‌ಗೆ ಹೋಗುತ್ತಿದ್ದರು. ಮುಜಫ್ಪರ್‌ನಗರದಲ್ಲಿ ರೇಲ್ವೇಯನ್ನೇರಿದ ಪ್ರಯಾಣಿಕರು  ಜಲಂಧರ್- ಅಮೃತಸರ್ ಎಕ್ಸ್ಪ್ರೆಸ್‌ವನ್ನೇರಿದ ರಹಮುತುಲ್ಲಾ ಬಳಿ ಸೀಟ್ ಬಿಟ್ಟುಕೊಡುವಂತೆ ಒತ್ತಾಯಿಸತೊಡಗಿದರು. ಅವರು ಅದಕ್ಕೊಪ್ಪದೇ ವಾಗ್ವಾದಕ್ಕಿಳಿದರು. ಸಂಘರ್ಷ ತಾರಕಕ್ಕೇರಿದಾಗ ಆರೋಪಿಗಳು ಆವೇಶದ ಭರದಲ್ಲಿ ಅವರನ್ನೆತ್ತಿ ರೇಲ್ವೇಯಿಂದ ಹೊರಕ್ಕೆಸೆದರು. 
 
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು . ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.  ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments