Webdunia - Bharat's app for daily news and videos

Install App

ಭೀಕರ ಬರ: ಒಂದು ಕೊಡ ನೀರಿಗಾಗಿ ಬಾವಿಗಿಳಿಯುತ್ತಿರುವ ನೀರೆಯರು

Webdunia
ಬುಧವಾರ, 20 ಏಪ್ರಿಲ್ 2016 (14:43 IST)
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು ಜನರು ಹನಿ ಹನಿ ನೀರಿಗಾಗಿ ಪರದಾಡುವಂತಾಗಿದೆ. ಗಡಿನಾಡಾದ ಬೆಳಗಾವಿಯ ಸುವಣ೯ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಗ್ರಾಮ ತಾರಿಹಾಳದಲ್ಲಿ ಹನಿ ಹನಿ ನೀರಿಗೂ ತತ್ವಾರ ಎದ್ದಿದ್ದು ಒಂದು ಕೊಡ ನೀರಿಗಾಗಿ ಮಹಿಳೆಯರು ಸುಮಾರು 40 ಅಡಿ ಆಳದ ಬಾವಿಗಿಳಿಯುತ್ತಿದ್ದಾರೆ. 
 
ಭೀಕರ ಬರದಿ೦ದ ಜಲಮೂಲಗಳೆಲ್ಲ ಬತ್ತಿ ಹೋಗಿದ್ದು, ಬಾವಿಯ ತಳದಲ್ಲಿ ಉಳಿದುಕೊಂಡಿರುವ ಹನಿ ನೀರನ್ನು ತುಂಬಿಕೊಳ್ಳಲು ಮಹಿಳೆಯರು ಪ್ರಾಣಾಪಾಯವನ್ನು ಲೆಕ್ಕಿಸದೇ 40 ಅಡಿ ಬಾವಿಗೆ ಇಳಿಯುತ್ತಿದ್ದಾರೆ. 
 
4,800 ಜನಸ೦ಖ್ಯೆ ಹೊ೦ದಿರುವ ಗ್ರಾಮ ಭೀಕರ ಬರದಿ೦ದ ತತ್ತರಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷತನವನ್ನು ಮೆರೆದಿದ್ದಾರೆ. 
 
ಆ ಬಾವಿಯ ನೀರು ಸಿಹಿ ಇರುವುದರಿ೦ದ ಬೇಡ ಎ೦ದರೂ, ಮಹಿಳೆಯರು ಇಳಿದು ನೀರು ತರುತ್ತಾರೆ ಎ೦ದು ಗ್ರಾಮ ಪ೦ಚಾಯಿತಿ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ ಬಾವಿಯಲ್ಲಿ ನೀರು ಅಲ್ಪ ಮಟ್ಟದಲ್ಲಿರುವುದರಿಂದ ಅದನ್ನು ಎತ್ತಲು ಬಾವಿಯೊಳಗೆ ಇಳಿಯುವುದು ಮಹಿಳೆಯರಿಗೆ ಅನಿವಾರ್ಯವೆನಿಸಿದೆ. 
 
ಹಗ್ಗ ಹಿಡಿದು ಕೆಳಕ್ಕಿಳಿಯುವ ಮಹಿಳೆಯರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವನ್ನು ತಂದುಕೊಳ್ಳುವ ಸಾಧ್ಯತೆಗಳಿವೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments