Webdunia - Bharat's app for daily news and videos

Install App

ದರೋಡೆ: ಸಬ್ ಇನ್ಸಪೆಕ್ಟರ್ ಸೇರಿ ಐವರು ಪೊಲೀಸರ ಬಂಧನ

Webdunia
ಬುಧವಾರ, 7 ಡಿಸೆಂಬರ್ 2016 (16:20 IST)
ಇದು ಬೇಲಿಯೇ ಎದ್ದ ಹೊಲ ಮೇಯ್ದ ಕಥೆ. ಉದ್ಯಮಪತಿಯೊಬ್ಬರನ್ನು ದರೋಡೆ ಮಾಡಿ 35.5 ಲಕ್ಷ ದೋಚಿದ್ದ ಆರೋಪದ ಮೇಲೆ ಒಬ್ಬ ಸಬ್ ಇನ್ಸಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಸೋಮವಾರ ಬಂಧಿಸಲಾಗಿದೆ. ಕಳೆದ ತಿಂಗಳು 22 ರಂದು ಪೀಣ್ಯಾದ ಬಳಿ ಈ ಘಟನೆ ನಡೆದಿತ್ತು. 
ಬಂಧಿತ ಆರೋಪಿಗಳನ್ನು ಸಬ್ ಇನ್ಸಪೆಕ್ಟರ್ ಮಲ್ಲಿಕಾರ್ಜುನ್, ಪೇದೆಗಳಾದ ಮಂಜುನಾಥ್, ಗಿರೀಶ್, ಚಂದ್ರಶೇಖರ್ ಮತ್ತು ಅನಂತರಾಜು, ವೆಲ್ಡರ್‌ಗಳಾದ ಜಾಫರ್ ಮತ್ತು ಭಾಸ್ಕರ್ ಎಂದು ಗುರುತಿಸಲಾಗಿದೆ. ಇಬ್ಬರು ವೆಲ್ಡರ್‌ಗಳ ಜತೆ ಕೈ ಜೋಡಿಸಿಕೊಂಡು ಈ ಐವರು ಪೊಲೀಸರು ತುಮಕೂರು ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಯನ್ನು ನಡೆಸುತ್ತಿರುವ ಗಂಗಾಧರ್ ಅವರನ್ನು ದರೋಡೆ ಮಾಡಿದ್ದರು. 
 
ಬಂಧಿತರಿಂದ 16 ಲಕ್ಷವನ್ನು ವಶಪಡಿಸಿಕೊಂಡಿರುವ ಪೊಲೀಸರು ಉಳಿದ ಹಣಕ್ಕಾಗಿ ಶೋಧ ನಡೆಸಿದ್ದಾರೆ.
 
ಗಂಗಾಧರ್ 38 ಲಕ್ಷ ಹಣದೊಂದಿಗೆ ಪೀಣ್ಯಾ 8ನೇ ಮೈಲಿಗೆ ಬಂದಿದ್ದರು. ಅಲ್ಲಿ ಅವರನ್ನು ದರೋಡೆ ಮಾಡಲಾಗಿತ್ತು. ಘಟನೆ ನಡೆದ 12 ದಿನಗಳ ಬಳಿಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 
 
ಘಟನೆ ವಿವರ: ನೋಟು ರದ್ಧತಿ ಬಳಿಕ ಜಾಫರ್ ಮತ್ತು ಭಾಸ್ಕರ್, ತಮ್ಮ ಬಳಿ ಫೋನ್ ನಂಬರ್ ಕೆಲ ಜನರಿಗೆ  ಕರೆ ಮಾಡಿ ತಾವು ನಿಮ್ಮ ಕಪ್ಪುಹಣವನ್ನು ಬಿಳಿ ಹಣವಾಗಿ ಮಾಡಿಕೊಡುತ್ತೇವೆ ಎಂದು ಹೇಳತೊಡಗಿದ್ದರು. ಅವರ ಈ ಬಲೆಗೆ ಗಂಗಾಧರ್ ಸಿಕ್ಕಿ ಬಿದ್ದಿದ್ದು ತಮ್ಮ ಬಳಿ ಸಾಕಷ್ಟು ಹಳೆಯ ನೋಟುಗಳಿದ್ದು ಅದನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಿದ್ದಾನೆ. 30% ಕಮಿಷನ್ ನೀಡಬೇಕೆಂದು ಗಂಗಾಧರ್‌ಗೆ ಒಪ್ಪಿಸಿದ ಇಬ್ಬರು ಪೀಣ್ಯಾದಲ್ಲಿ ಆತನ ಭೇಟಿಗೆ ನಿಗದಿ ಪಡಿಸಿದರು. 
 
ಈ ಕುರಿತು ಸಬ್ ಇನ್ಸಪೆಕ್ಟರ್ ಮಲ್ಲಿಕಾರ್ಜುನ್ ಜತೆ ಮಾತನಾಡಿ ವಂಚನೆ ಮಾಡುವ ಡೀಲ್ ಕುದುರಿಸಿದ ಭಾಸ್ಕರ್ ಮತ್ತು ಜಾಫರ್ ಅವರಿಗೂ ಶೇರ್ ನೀಡುವುದಾಗಿ ವಾಗ್ದಾನ ಮಾಡಿದ್ದರು. 
 
ಜಾಫರ್ ಮತ್ತು ಭಾಸ್ಕರ್ 8ನೇ ಮೈಲಿಯಲ್ಲಿ ಗಂಗಾಧರ್ ಅವರನ್ನು ಭೇಟಿಯಾಗಿದ್ದಾರೆ. ಪೂರ್ವ ಯೋಜನೆಯಂತೆ ಮಲ್ಲಿಕಾರ್ಜುನ್ ಮತ್ತು ಇತರ ನಾಲ್ವರು ಪೇದೆಗಳು ಅಲ್ಲಿಗೆ ಆಗಮಿಸಿ ಈ ಹಣಕ್ಕೆ ದಾಖಲೆಗಳನ್ನು ಕೇಳಿದ್ದಾರೆ. ಆದರೆ  ಯಾವುದೇ ದಾಖಲೆಗಳನ್ನು ತೋರಿಸಲು ಗಂಗಾಧರ್ ವಿಫಲರಾದಾಗ ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಮುಂದಿನ ಸುದ್ದಿ
Show comments