Webdunia - Bharat's app for daily news and videos

Install App

ಪುಟ್ಟ ಬಾಲಕಿ ಜತೆ ಬಿಜೆಪಿ ರಾಜ್ಯಾಧ್ಯಕ್ಷರ ಪುತ್ರನ ವಿವಾಹ

Webdunia
ಶುಕ್ರವಾರ, 1 ಜುಲೈ 2016 (16:18 IST)
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ತಾಲಾ ಮರಾಂಡಿ ಪುತ್ರ ಮುನ್ನಾ ಮರಾಂಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 

 
ಮುನ್ನಾ ಮರಾಂಡಿ ಮಂಗಳವಾರ 11 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ. 
 
ಬುಧವಾರ ಆಯೋಜಿಸಲಾಗಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಘುಬರ ದಾಸ್ ಕೂಡ ಭಾಗವಹಿಸಬೇಕಿತ್ತು. ಆದರೆ ವಿವಾದಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಅವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. 
 
ಮುನ್ನಾ ವಿವಾಹವಾಗಿರುವ ಬಾಲಕಿಯು 6ನೇ ತರಗತಿ ಓದುತ್ತಿದ್ದಳೆಂದು ಮಾಧ್ಯಮಗಳು ವರದಿ ಮಾಡಿವೆ. 
 
ಮುನ್ನಾ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷ ಕಾಲ ಲೈಂಗಿಕ ಕಿರುಕುಳ ನೀಡಿದ್ದ ಎಂದು ಬಾಲಕಿಯೊಬ್ಬಳು ದೂರು ನೀಡಿರುವ ಒಂದು ವಾರದ ಬಳಿಕ ಮತ್ತೊಂದು ಪ್ರಕರಣದಲ್ಲಾತ ಸಿಲುಕಿಕೊಂಡಿದ್ದಾನೆ. 
 
ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ತನ್ನನ್ನು ದೂರ ಮಾಡಿದ್ದಾನೆ ಎಂದು 16 ವರ್ಷದ ಬಾಲಕಿಯೋರ್ವಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಪ್ರಕರಣವೀಗ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿದೆ. 
 
ತನ್ನ ಜತೆ ಗೆಳೆತನ ಬೆಳೆಸಿಕೊಂಡ ಮುನ್ನಾ ಮೊಬೈಲ್ ಕೊಡಿಸಿ ಹತ್ತಿರವಾಗಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ಬಳಸಿಕೊಂಡಿದ್ದ . ಮುನ್ನಾ ಮತ್ತೊಂದು ಮದುವೆಯಾಗುವ ಯೋಜನೆ ರೂಪಿಸಿದ್ದಾನೆ ಎಂಬುದು ತಿಳಿದ ಮೇಲೆಯೇ ನಾನು ದೂರು ನೀಡಿದ್ದಾಗಿ ಆಕೆ ಹೇಳಿದ್ದಳು.
 
ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ವಹಿಸಿದ್ದು, ಯಾವೊಬ್ಬ ನಾಯಕರು ಕೂಡ ರಾಜ್ಯಾಧ್ಯಕ್ಷನ ಸಮರ್ಥನೆಗೆ ನಿಂತಿಲ್ಲ. 
 
ಸಂಪೂರ್ಣ ಘಟನಾವಳಿಗಳ ತನಿಖೆ ನಡೆಯಬೇಕೆಂದು ವಿರೋಧ ಪಕ್ಷದವರು ಆಗ್ರಹಿಸುತ್ತಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್

ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಕೇಳಿಬಂತು ಗಂಭೀರ ಆರೋಪ: ಏನಿದು ವಂಚನೆ ಪ್ರಕರಣ

ಅಮುಲ್ ನಮ್ದೇ, ನಂದಿನಿನೂ ನಮ್ದೇ: ಧ್ವೇಷ ಯಾಕೆ ಮಾಡ್ತೀರಿ ಎಂದ ಸಿಟಿ ರವಿ

ಸೇವ್ ನಂದಿನಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮೆಟ್ರೋದಲ್ಲಿ ಅಮೂಲ್ ಗೆ ಅವಕಾಶ ಕೊಟ್ಟಿತಾ

ನಮ್ಮ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಿರೋದು ಪ್ರವೇಶ ಶುಲ್ಕ ಯಾಕೆ: ಮೋಹನ್ ದಾಸ್ ಪೈ

ಮುಂದಿನ ಸುದ್ದಿ