Select Your Language

Notifications

webdunia
webdunia
webdunia
webdunia

ಅಳಿಯನ ಕಿರುಕುಳಕ್ಕೆ ತಂದೆ ಮಗಳು ಬಲಿ

ಅಳಿಯನ ಕಿರುಕುಳಕ್ಕೆ ತಂದೆ ಮಗಳು ಬಲಿ
ಮೈಸೂರು , ಶನಿವಾರ, 27 ಫೆಬ್ರವರಿ 2016 (11:21 IST)
ತವರಿನ ಆಸ್ತಿಯಲ್ಲಿ ಪಾಲು ಬೇಕೆಂದು ಗಂಡ ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ನೊಂದ ಪತ್ನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ನಡೆದಿದೆ. ಇದೇ ಕಾರಣಕ್ಕೆ ಆಕೆಯ ತಂದೆ ಕೂಡ ಕಳೆದ ನಾಲ್ಕು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
 
ಮೃತಳನ್ನು 25 ವರ್ಷದ ಭ್ರಮರಾಂಭಿಕ (25) ಎಂದು ಗುರುತಿಸಲಾಗಿದೆ.
 
ಆರೋಪಿ ನಿರಂಜನ್ (34)ಆಸ್ತಿಯಲ್ಲಿ ಪಾಲಿಗಾಗಿ ಪತ್ನಿಯ ತಂದೆ ಮಹದೇವಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆತನ ಕಾಟ ತಾಳಲಾರದೆ ಮಹದೇವಪ್ಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ನಿರಂಜನ್ ಕಾಟ ತಾಳಲಾರದೆ ಮಹದೇವಪ್ಪ ನಾಲ್ಕು ತಿಂಗಳ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಮಗಳು ಕೂಡ ತಂದೆಯನ್ನೇ ಅನುಸರಿಸಿದ್ದಾಳೆ.  
 
ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಆರೋಪಿ ನಿರಂಜನ್ ಮತ್ತು ಆತನ ತಾಯಿ ತಲೆ ಮರೆಸಿಕೊಂಡಿದ್ದಾರೆ. 

Share this Story:

Follow Webdunia kannada