ಒಂದೇ ಕುಟುಂಬದ 6 ಮಂದಿ ರಾಜ್ಯಪಾಲರಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಪ್ರಸಂಗ ಬಾಗಲಕೋಟೆ ಬದಾಮಿ ತಾಲ್ಲೂಕಿನಲ್ಲಿ ನಡೆದಿದೆ.
ಬಾಗಲಕೋಟೆ ಬದಾಮಿ ನಗರದ ವಾರ್ಡ್ ನಂಬರ್ 5 ರ ನಿವಾಸಿ ಬಸಪ್ಪ ತಳವಾರ ಕುಟುಂಬ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದವರಾಗಿದ್ದಾರೆ.
ತಳವಾರ ಮನೆ ಪಕ್ಕದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಶೋಭಾ ಬಾಲಗೌಡರ್ ಅವರು ನಿಯಮ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ತಡೆಯುವಂತೆ ಪುರಸಭೆಗೆ ತಳವಾರ್ ಕುಟುಂಬ ಮನವಿ ಮಾಡಿತ್ತು.
ಕಳೆದ ಒಂದೂವರೆ ವರ್ಷದಿಂದ ಮನವಿ ಮಾಡುತ್ತಿದ್ದರೂ ಪುರಸಭೆ ಸ್ಪಂದಿಸುತ್ತಿಲ್ಲ. ಹೀಗಾಗಿ ಮನನೊಂದು ಸಾವಿಗೆ ಶರಣಾಗ ಬಯಸಿದ್ದೇವೆ. ದಯಾಮರಣಕ್ಕೆ ಅನುಮತಿ ನೀಡಿ ಎಂದು ಕುಟುಂಬ ರಾಜ್ಯಪಾಲರಿಗೆ ಅರ್ಜಿ ರವಾನಿಸಿದ್ದಾರೆ.