Webdunia - Bharat's app for daily news and videos

Install App

ಮೈನಾ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರಿದ ಕುಟುಂಬಗಳು

Webdunia
ಗುರುವಾರ, 28 ಜುಲೈ 2016 (06:33 IST)
ಮೈನಾ ಹಕ್ಕಿಗಾಗಿ ನೆರೆಹೊರೆಯ ಕುಟುಂಬಗಳ ನಡುವೆ ನಡೆದ ಜಗಳ ಕೋರ್ಟ್ ಮೆಟ್ಟಿಲೇರಿದ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ 24 ಜಿಲ್ಲೆಯಲ್ಲಿ ನಡೆದಿದೆ.


ಜಿಲ್ಲೆಯ ವಿದ್ಯಾಧರಪುರದಲ್ಲಿ ಈ ಘಟನೆ ನಡೆದಿದ್ದು, ಮಾತಿನಲ್ಲಿ ಪ್ರಾರಂಭವಾದ ಜಗಳ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುವ ಮಟ್ಟಿಗೆ ಬೆಳೆದಿದೆ. ಬಳಿಕ ವಿವಾದ ಕೋರ್ಟ್ ಮೆಟ್ಟಿಲೇರಿದ್ದು ಜಗಳದ ಹಿಂದಿನ ಕಾರಣವನ್ನು ತಿಳಿದ ಬಳಿಕ ಆಶ್ಚರ್ಯ ಪಡುವ ಸರದಿ ವಕೀಲರದು ಮತ್ತು  ನ್ಯಾಯಮೂರ್ತಿಗಳದಾಗಿತ್ತು.

ಘಟನೆ ವಿವರ: ಅಮಿತ್ ಕುಮಾರ್ ಸರ್ಕಾರ್ ಅವರು ಸಾಕಿದ್ದ ಮೈನಾ ಹಕ್ಕಿ ಜೂನ್ 14 ರಂದು ನೆರೆಮನೆಯ ಮಿಲನ್ ಮಂಡಲ್ ಅವರ ಮನೆಗೆ ಹಾರಿ ಹೋಗಿತ್ತು. ಮಿಲನ್ ಅವರ ತಾಯಿ ಮತ್ತು ಪತ್ನಿ ಆಹಕ್ಕಿಯನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡರು. ಸಂಜೆಯಾದರೂ ಪ್ರೀತಿಯ ಹಕ್ಕಿ ಮನೆಗೆ ಮರಳದಿದ್ದಾಗ ಗಾಬರಿಯಾದ ಸರ್ಕಾರ್ ಕುಟುಂಬದವರಿಗೆ ಕೊನೆಗೆ ಅದು ಮಿಲನ್ ಮನೆಯಲ್ಲಿರುವುದು ಗೊತ್ತಾಗಿದೆ.

ಇದೇ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಜಗಳ ಪ್ರಾರಂಭವಾಗಿ ಪರಷ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಅಮಿತ್ ಅವರ ತಲೆಗೆ ಗಾಯವಾಗಿದ್ದು, ಮಿಲನ್ ಅವರ ಪತ್ನಿ ಮಿತಾ ಮತ್ತು ತಾಯಿ ದುರ್ಗಾ ವಿರುದ್ಧ ಸೋನಾರ್ಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಯಿತು.

ಐಪಿಸಿ ವಿಭಾಗ 326, 341 ಮತ್ತು 321(ಜಾಮೀನು ರಹಿತ) ಅಡಿಯಲ್ಲಿ ಪ್ರಕರಣ ಮಿಲನ್ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಾಯಿತು. ಬಂಧನವನ್ನು ತಪ್ಪಿಸಿಕೊಳ್ಳಲು ಮಿಲನ್ ಕುಟುಂಬ ಕೋರ್ಟ್‌ಗೆ ಹೋಗಬೇಕಾಯಿತು.  ಒಂದು ಹಕ್ಕಿಗಾಗಿ ಪ್ರಾರಂಭವಾದ ಜಗಳ ಕೋರ್ಟ್ ಮೆಟ್ಟಿಲೇರಿದ್ದು ಜಡ್ಜ್, ವಕೀಲರನನ್ನು ಸಹ ಅಚ್ಚರಿಗೆ ದೂಡಿತು. ಮಿಲನ್ ಕುಟುಂಬಕ್ಕೆ  ನ್ಯಾಯಾಧೀಶರು 10ಸಾವಿರ ರೂಪಾಯಿ ಬಾಂಡ್ ಖಾತರಿಯೊಂದಿಗೆ ಜಾಮೀನು ನೀಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತ: ಸಹೋದರನ ಶವಕ್ಕೆ ಹೆಗಲುಕೊಟ್ಟು ಬಿಕ್ಕಿಬಿಕ್ಕಿ ಅತ್ತ ವಿಶ್ವಾಸ್ ರಮೇಶ್ ವಿಡಿಯೊ ಇಲ್ಲಿದೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವವರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ

ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಹೊಸ ತಿರುವು: ತನಿಖೆಯನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

Viral video: ಹೆದ್ದಾರಿಯಲ್ಲಿ ಬೈಕ್ ರೈಡ್ ವೇಳೆ ಜೋಡಿ ಜೀವಗಳ ರೊಮ್ಯಾನ್ಸ್: ಕೊನೆಗೆ ಆಗಿದ್ದೇನು

ಆಪರೇಷನ್ ಸಿಂಧೂರ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ: ಟ್ರಂಪ್‌ಗೆ ಪ್ರಧಾನಿ ಮೋದಿ ಮನವರಿಕೆ

ಮುಂದಿನ ಸುದ್ದಿ
Show comments