Webdunia - Bharat's app for daily news and videos

Install App

ದೇವ ಹನುಮಂತನಿಗೂ ನೋಟಿಸ್

Webdunia
ಮಂಗಳವಾರ, 9 ಫೆಬ್ರವರಿ 2016 (12:32 IST)
ಸೀತಾಮಾತೆಯನ್ನು ಕಾಡಿಗೆ ಕಳುಹಿದ ಆರೋಪದ ಮೇಲೆ ಶ್ರೀರಾಮಚಂದ್ರ ಮತ್ತು ಲಕ್ಷ್ಮಣನ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದೂಡಿದ್ದ ಪ್ರಕರಣ ನಿಮಗೆ ಗೊತ್ತಿರಬಹುದು. ಆ ಪ್ರಸಂಗ ನಡೆದು 8 ದಿನಗಳಾಗುವಷ್ಟರಲ್ಲಿ ಶ್ರೀರಾಮ ದಾಸ ಹನುಮನಿಗೆ ನೋಟಿಸ್ ಕಳುಹಿಸಿದ ಸುದ್ದಿ ಈಗ ಕೇಳಿ ಬಂದಿದೆ. 

ಲೋಹಿಯಾ ನಗರದಲ್ಲಿ ರಸ್ತೆ ಬದಿ ನಿರ್ಮಿಸಲಾಗಿರುವ ಹನುಮಾನ್ ಮಂದಿರ, ಸಾರ್ವಜನಿಕರ, ವಾಹನ ಸವಾರರ ಓಡಾಡಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದು ಇದನ್ನು ಕೆಡವಿ ಹಾಕಲಾಗುವುದು ಎಂದು ಜಿಲ್ಲಾಡಳಿತ ನೋಟಿಸ್ ನೀಡಿದೆ. ಆದರೆ ಈ ನೋಟಿಸ್ ಅನ್ನು ಹನುಮಂತನ ಹೆಸರಿಗೆ ಕಳುಹಿಸಲಾಗಿದೆ.'ನಿಮ್ಮ ದೇವಸ್ಥಾನವನ್ನು ಕೆಡವಿ ಹಾಕಬಾರದು ಅನ್ನುವುದಕ್ಕೆ ಕಾರಣ ನೀಡಿ' ಎಂದು ನೋಟಿಸ್‌‌ನಲ್ಲಿ ಸೂಚಿಸಲಾಗಿದೆ. 
 
ಬಿಹಾರದಲ್ಲಿ ಇತ್ತೀಚಿಗೆ ಅತಿ ಹೆಚ್ಚಾಗಿ ವಿವಾದಕ್ಕೊಳಪಡುತ್ತಿರುವ ದೇವರೆಂದರೆ ಹನುಮಂತ. ಈ ನೋಟಿಸ್ ಬಂದ ಗಂಟೆಗಳೊಳಗೆ ಬಜರಂಗ ದಳದ ಕಾರ್ಯಕರ್ತರು ಮತ್ತು ಬೆಂಬಲಿಗರು ನೋಟಿಸ್‌ನ್ನು ಹಿಂಪಡೆಯುವಂತೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
 
ವಿವಾದ ಭುಗಿಲೆಳುತ್ತಿರುವ ಸೂಚನೆ ದೊರೆತ ಕೂಡಲೆ ನೋಟಿಸ್ ರದ್ದುಗೊಳಿಸಿರುವ ಜಿಲ್ಲಾಡಳಿತ ಯಾರು ಆ ನೋಟಿಸ್ ಜಾರಿಗೊಳಿಸಿರುವುದು ಎಂದು ತನಿಖೆ ನಡೆಸುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments