ಸೈಕಲ್ ಪಂಕ್ಚರ್ ಆಗಿದೆ, ಆನೆ ದುಡ್ಡನ್ನು ನುಂಗಿದೆ: ರಾಹುಲ್ ಗಾಂಧಿ

Webdunia
ಸೋಮವಾರ, 12 ಸೆಪ್ಟಂಬರ್ 2016 (16:05 IST)
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಡಳಿತಾರೂಢ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ. ಆನೆ (ಬಿಎಸ್‌ಪಿ ಚುನಾವಣಾ ಚಿಹ್ನೆ) ಎಲ್ಲ ಹಣವನ್ನು ತಿಂದುಹಾಕಿದರೆ, ಸೈಕಲ್ (ಸಮಾಜವಾದಿ ಚುನಾವಣಾ ಚಿಹ್ನೆ) ಪಂಕ್ಚರ್ ಆಗಿ ನಿಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. 
 
ಹಾಥಿ ಸಾರಾ ಪೈಸಾ ಖಾಗಯಾ( ಆನೆ ಹಣವನ್ನೆಲ್ಲ ತಿಂದು ಹಾಕಿತು), ಹಾಥಿ ಕೊ ಅಪ್ನೆ ಮಾರ್ ಕೆ ಭಗಾ ದಿಯಾ (ಅದನ್ನು ನೀವು ಹೊಡೆದೋಡಿಸಿದಿರಿ. ಪಿರ್ ಆಪ್ ಸೈಕಲ್ ಲಾಯೇ (ಬಳಿಕ ನೀವು ಸೈಕಲ್ ತಂದಿರಿ),ಯೆ ಪಾಂಚ್ ಸಾಲ್ ಸೆ ಪಂಸಿ ಹುಯಿ ಹೈ, ಹಿಲ್ ನಹಿ ರಹೀ ಹೈ ( ಸೈಕಲ್ ಕಳೆದ ಐದು ವರ್ಷಗಳಿಂದ ಸಿಕ್ಕಿ ಹಾಕಿಕೊಂಡಿದೆ, ಅಲ್ಲಾಡುತ್ತಲೂ ಇಲ್ಲ) ಉಸ್ಕಾ ಟೈರ್ ಪಂಕ್ಚರ್ ಹೈ, ಔರ್ ಆಪ್ಕೋ ರೇಷನ್ ಕಾರ್ಡ್ ನಹೀಂ ದಿಲಾ ಪಾ ರಹೀ ಹೈ( ಅದರ ಚಕ್ರ ಪಂಕ್ಚರ್ ಆಗಿದೆ, ಹೀಗಾಗಿ ನಿಮಗೆ ಪಡಿತರ ಚೀಟಿಯನ್ನು ಕೊಡಿಸಲು ಅದರಿಂದಾಗುತ್ತಿಲ್ಲ) ಎಂದು ಯುಪಿಯಲ್ಲಿ ಕಿಸಾನ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಅಣಕವಾಡಿದ್ದಾರೆ. 
 
'ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳೆರಡು ನಿಮಗೆ ವಂಚನೆ ಮಾಡಿದ್ದು, ನೀವೀಗ 'ಕೈ' ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಆ ಬಳಿಕ ಪಡಿತರ ಚೀಟಿ ಮತ್ತು ರೈತರಿಗಾಗಿ ನಾವೇನು ಮಾಡುತ್ತೇವೆ ಎಂದು ನೋಡಿ ', ಎನ್ನುವುದರ ಮೂಲಕ ಅವರು ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಾರೆ. 
 
ಪ್ರಧಾನಿ ವಿರುದ್ಧವೂ ಕುಹಕವಾಡಿದ ಅವರು ತನ್ನ ಸೂಟ್ ಕೊಳೆಯಾಗಬಾರೆಂದು ಪ್ರಧಾನಿ ಕೃಷಿಕರನ್ನು ಭೇಟಿಯಾಗುವುದಿಲ್ಲ. ಅಮೇರಿಕಾ ಮತ್ತು ಚೀನಾಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮಾತ್ರ ಅವರು ಇಷ್ಟಪಡುತ್ತಾರೆ ಎಂದು ಜರಿದಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

25 ಪ್ರಕರಣಗಳಲ್ಲಿ ನ್ಯಾಯಾಲಯದ ವಾರೆಂಟ್ ತಪ್ಪಿಸಿ ಪರಾರಿಯಾಗಿದ್ದವ ಕೊನೆಗೂ ಅರೆಸ್ಟ್‌

MGNREGA ಮರುನಾಮಕರಣದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಕಿಡಿ, ನಾಳೆಯಿಂದ ಪ್ರತಿಭಟನೆ

ದಿಡೀರನೆ ದೆಹಲಿ ಜನತೆ ಬಳಿ ಕ್ಷಮೆಯಾಚಿಸಿದ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಸಿಡ್ನಿ ಗುಂಡಿನ ದಾಳಿಕೋರರಲ್ಲಿ ಒಬ್ಬಾತ ಹೈದರಾಬಾದ್‌ ಮೂಲದವ, ಇಲ್ಲಿದೆ ಮಾಹಿತಿ

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಧಾಂದಲೆ: ಪ.ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments