Webdunia - Bharat's app for daily news and videos

Install App

1952 ರ ನಂತರ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಸಂಸದರ ಆಯ್ಕೆ

Webdunia
ಶನಿವಾರ, 17 ಮೇ 2014 (16:15 IST)
ಭಾರತದ ಲೋಕಸಭಾ ಚುನಾವಣಾ ಇತಿಹಾಸದ ಪ್ರಥಮ ಚುನಾವಣೆ 1952ರ ಬಳಿಕ ಪ್ರಥಮ ಬಾರಿಗೆ ಅತಿ ಕಡಿಮೆ ಸಂಖ್ಯೆಯ ಮುಸ್ಲಿಂ ಮತದಾರರು ಆಯ್ಕೆಯಾಗಿದ್ದಾರೆ.  
 
ಮೊದಲ ಚುನಾವಣೆಯ ನಂತರ ಇಲ್ಲಿಯವರೆಗಿನ ದಾಖಲೆಯಲ್ಲಿ  ಅತಿ ಕಡಿಮೆ ಎಂದರೆ 30 ಮುಸ್ಲಿಂ ಪ್ರತಿನಿಧಿಗಳು ಕಳೆದ ಬಾರಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಮತ್ತೂ ಇಳಿಕೆ ಕಂಡುಬಂದಿದ್ದು, ಜಯಗಳಿಸಿದ ಅಭ್ಯರ್ಥಿಗಳ ಸಂಖ್ಯೆ ಕೇವಲ 24. ಅಂದರೆ ಕೆಳಮನೆಯ ಬಲದಲ್ಲಿ ಅವರ ಪಾತ್ರ ಕೇವಲ 4.4%.  
 
1952ರಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಕೇವಲ 4.3% ಮುಸ್ಲಿಮ‌ರು ಮಾತ್ರ ಲೋಕಸಭೆಯನ್ನು ಪ್ರವೇಶಿಸಿದ್ದರು. ನಂತರದ ದಶಕಗಳಲ್ಲಿ ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 1980ರಲ್ಲಿ ಈ ಸಂಖ್ಯೆ 49 ಅಂದರೆ 9.3% ಕಂಡು ಬಂದಿತ್ತು. 
 
ಪ್ರಥಮ ಬಾರಿ ಉತ್ತರಪ್ರದೇಶದಿಂದ ಓರ್ವ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ. ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲೂ ಇದೇ ಸ್ಥಿತಿ ವ್ಯಕ್ತವಾಗಿದೆ. ಈ ಸಮುದಾಯದಿಂದ ಪ್ರತಿನಿಧಿಗಳು ಆಯ್ಕೆಯಾದ ರಾಜ್ಯಗಳೆಂದರೆ  ಪಶ್ಚಿಮ ಬಂಗಾಳ (ಎಂಟು), ಜಮ್ಮು ಕಾಶ್ಮೀರ (ನಾಲ್ಕು), ಬಿಹಾರ (ನಾಲ್ಕು), ಕೇರಳ (ಮೂರು), ಅಸ್ಸಾಂ (ಎರಡು) ಮತ್ತು ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪ (ಒಂದು). ಇವುಗಳಲ್ಲಿ, ಸಹಜವಾಗಿ ಜೆ & ಕೆ ಹಾಗೆಯೇ ಲಕ್ಷದ್ವೀಪ ಮುಸ್ಲಿಂ ಸಮುದಾಯ ಹೆಚ್ಚಳವಾಗಿರುವ ಪ್ರದೇಶಗಳಾಗಿವೆ. 
 
ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಗೆಲುವು ಸಾಧಿಸಿರುವ ಬಿಜೆಪಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಇರಲಿಲ್ಲವಾದ್ದರಿಂದ ಕೆಳಮನೆಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕಡಿಮೆ ಇರುವುದು ಆಶ್ಚರ್ಯ ಎನಿಸುತ್ತಿಲ್ಲ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

Show comments