Webdunia - Bharat's app for daily news and videos

Install App

ಭೋಪಾಲ್ ಜೈಲಿನಿಂದ ಪರಾರಿಯಾಗಿದ್ದ 8 ಸಿಮಿ ಉಗ್ರರು ಎನ್‌ಕೌಂಟರ್‌ನಲ್ಲಿ ಫಿನಿಶ್

Webdunia
ಸೋಮವಾರ, 31 ಅಕ್ಟೋಬರ್ 2016 (12:38 IST)
ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದ ನಿಷೇಧಿತ ಸಿಮಿ ಸಂಘಟನೆಯ ಎಂಟು ಉಗ್ರರನ್ನು ನಗರದ ಹೊರವಲಯದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.
 
ಇಂದು ಬೆಳಗಿನ ಜಾವ ಸಿಮಿ ಉಗ್ರರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿ, ಬೆಡ್‌ಶೀಟ್‌ಗಳನ್ನು ಹಗ್ಗವಾಗಿ ಮಾಡಿಕೊಂಡು ಜೈಲಿನ 20 ಅಡಿ ಎತ್ತರದ ಗೋಡೆಯಿಂದ ಹಾರಿ ಪರಾರಿಯಾಗಿದ್ದರು.
 
ಅಮ್ಜದ್, ಜಾಕೀರ್ ಹುಸೇನ್ ಸಾದಿಕ್, ಮೊಹಮ್ಮದ್ ಸಲಿಕ್, ಮುಜಿಬ್ ಶೇಖ್, ಮೆಹಬೂಡ್ ಗುಡ್ಡು, ಮೊಹಮ್ಮದ್ ಖಾಲಿದ್ ಅಹ್ಮದ್, ಅಕೀಲ್ ಮತ್ತು ಮಾಜಿದ್ ಎಂದು ಗುರುತಿಸಲಾಗಿದೆ. 
 
ಸಿಮಿ ಉಗ್ರರು ಜೈಲಿನಿಂದ ಪರಾರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಬಂಧನಕ್ಕಾಗಿ ಪೊಲೀಸರು ಎಲ್ಲಾ ಕಡೆ ಹೈ ಅಲರ್ಟ್ ಘೋಷಿಸಿ ಚೆಕ್‌ಪೋಸ್ಟ್‌ಗಳಲ್ಲಿ ಭಾರಿ ತಪಾಸಣೆ ಆರಂಭಿಸಿದ್ದರು.
 
ಅತ್ಯಂತ ಭದ್ರತೆಯಿರುವ ಜೈಲಿನಿಂದ ಸಿಮಿ ಉಗ್ರರು ಪರಾರಿಯಾಗಿದ್ದ ಬಗ್ಗೆ ಗೃಹ ಸಚಿವ ಭೂಪೇಂದ್ರ ಸಿಂಗ್ ಇದೊಂದು ಭದ್ರತಾ ಲೋಪ ಎಂದು ಒಪ್ಪಿಕೊಂಡಿದ್ದಾರೆ.
 
ಇದಕ್ಕಿಂತ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಜೈಲಿನ ಡಿಐಜಿ, ಜೈಲಿನ ಸೂಪರಿಟೆಂಡೆಂಟ್ ಸೇರಿದಂತೆ ಇತರ ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದರು.
 
ಸಿಮಿ ಉಗ್ರರು ಸ್ಟೀಲ್ ಪ್ಲೇಟ್‌‍ ಮತ್ತು ಗ್ಲಾಸ್‌ನಿಂದ ಭದ್ರತಾ ಸಿಬ್ಬಂದಿಯ ಕತ್ತು ಕತ್ತರಿಸಿ ಹಾಕಿ ಪರಾರಿಯಾಗಿದ್ದರು. 
 
ಏತನ್ಮಧ್ಯೆ, ಕೇಂದ್ರ ಗೃಹ ಸಚಿವಾಲಯ ಜೈಲಿನಿಂದ ಸಿಮಿ ಉಗ್ರರು ಪರಾರಿಯಾದ ಘಟನೆಗೆ ಸಂಬಂಧಿಸಿದ ವರದಿ ನೀಡುವಂತೆ  ಆದೇಶ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

30 ವರ್ಷಗಳಲ್ಲೇ ಇದು ಭೀಕರ ದಾಳಿ: ಪಹಲ್ಗಾಮ್‌ನಲ್ಲಿ ದಾಳಿಯಲ್ಲಿ 27ಕ್ಕೂ ಹೆಚ್ಚು ಪ್ರವಾಸಿಗರು ಸಾವು ಶಂಕೆ

Pehalgam terror attack: ಪ್ಯಾಂಟ್ ಹಿಡಿದೆಳೆದು ಹಿಂದೂ ಎಂದು ಕನ್ ಫರ್ಮ್ ಮಾಡಿ ಕೊಂದೇ ಬಿಟ್ಟ ಉಗ್ರರು

Pehalgam Terror Attack: ಸ್ಥಳಕ್ಕೆ ಅಮಿತ್ ಶಾ ಎಂಟ್ರಿ, ಉಗ್ರರನ್ನು ಸುಮ್ನೇ ಬಿಡಲ್ಲ ಎಂದ ಮೋದಿ

ಉಗ್ರರ ಪೈಶಾಚಿಕ ದಾಳಿಯಲ್ಲಿ ಸಿಲುಕಿದ ಶಿವಮೊಗ್ಗದ ಕುಟುಂಬ: ಕಾಶ್ಮೀರಕ್ಕೆ ರಾಜ್ಯದ ಅಧಿಕಾರಿಗಳ ದೌಡು

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕ ಉದ್ಯಮಿ ಬಲಿ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ

ಮುಂದಿನ ಸುದ್ದಿ
Show comments