Select Your Language

Notifications

webdunia
webdunia
webdunia
webdunia

ಗುಡಿಸಲಿಗೆ ಕಾರು ನುಗ್ಗಿಸಿದ ಮಾಜಿ ಶಾಸಕನ ಪುತ್ರ: ಐವರ ದುರ್ಮರಣ

ಗುಡಿಸಲಿಗೆ ಕಾರು ನುಗ್ಗಿಸಿದ ಮಾಜಿ ಶಾಸಕನ ಪುತ್ರ:  ಐವರ ದುರ್ಮರಣ
ಲಖನೌ , ಸೋಮವಾರ, 9 ಜನವರಿ 2017 (07:17 IST)
ಕುಡಿದ ಮತ್ತಿನಲ್ಲಿ ಗುಡಿಸಲಿಗೆ ಕಾರು ನುಗ್ಗಿದ ಪರಿಣಾಮ ನಾಲ್ವರು ಕೂಲಿ ಕಾರ್ಮಿಕರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡ ದಾರುಣ ಘಟನೆ ಉತ್ತರ ಪ್ರದೇಶದ ಲಖನೌನ ದಾಲಿಬಾಗ್ ಭಾನುವಾರ ನಡೆದಿದೆ.
 
ಘಟನೆ ನಡೆದಾಗ ಕೂಲಿ ಕಾರ್ಮಿಕರು ನಿದ್ರೆಯಲ್ಲಿದ್ದು ವೇಗವಾಗಿ ಬಂದ ಕಾರು ಗುಡಿಸಲಿಗೆ ನುಗ್ಗಿದ ಪರಿಣಾಮ ಘಟನೆ ನಡೆದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. 
 
ಕಾರ್ ನಡೆಸುತ್ತಿದ್ದವರ ವಿದ್ಯಾರ್ಥಿಗಳಾಗಿದ್ದು ಕುಡಿದ ಮತ್ತಿನಲ್ಲಿದ್ದರು. ಕಾರ್ ಚಲಾಯಿಸುತ್ತಿದ್ದವನು ದಿವಂಗತ ಮಾಜಿ ಶಾಸಕ ಅಶೋಕ್ ಕುಮಾರ್ ಪುತ್ರ ಆಯುಷ್ ಕುಮಾರ್ ಎಂದು ತಿಳಿದು ಬಂದಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ನಾಲ್ವರು ಮದ್ಯ ಸೇವಿಸಿದ್ದು ಸಾಬೀತಾಗಿದೆ. 
 
ಐಪಿಸಿ ಸೆಕ್ಷನ್ 304 ನತ್ತು 338ರ ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಒನ್‍ಪ್ಲಸ್ ಮೊಬೈಲ್ ಮಾರಾಟ ಮಳಿಗೆ