Webdunia - Bharat's app for daily news and videos

Install App

ಕುಡಿದ ಮತ್ತಿನಲ್ಲಿ ವಧುವಿಗೆ ತಾಳಿಕಟ್ಟಲು ನಿರಾಕರಿಸಿದ ವರ, ಬೇರೆ ವಧು ಬೇಕೆಂದ..!

Webdunia
ಮಂಗಳವಾರ, 15 ಮಾರ್ಚ್ 2016 (15:50 IST)
ವಿವಾಹಗಳು ಸಣ್ಣಪುಟ್ಟ ವಿಷಯಕ್ಕೆ ಮುರಿದು ಬಿದ್ದಿರುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಂದು ವಿವಾಹ, ವಿಚಿತ್ರ ರೀತಿಯಲ್ಲಿ ಮುರಿದು ಬಿದ್ದಿದೆ.
 
ವಿವಾಹದ ಸಂಭ್ರಮದಲ್ಲಿದ್ದ ವರ, ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ನನಗೆ ಈ ವಧು ಬೇಡ, ಇವಳು ಸರಿಯಿಲ್ಲ. ಹಾಗೇ ಹೀಗೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನಗೆ ಬೇರೆ ವಧು ಬೇಕು ಎಂದು ಹಟಹಿಡಿದ ಘಟನೆ ವರದಿಯಾಗಿದೆ.   
 
ವರಮಹಾಶಯ ಕುಡಿದ ಮತ್ತಿನಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬೇರೆ ಯುವತಿಯೊಂದಿಗೆ ವಿವಾಹವಾಗುವುದಾಗಿ ಹಟಹಿಡಿದಿದ್ದಾನೆ, ಕೊನೆಗೆ ಕಲ್ಯಾಣ ಮಂಟಪದಲ್ಲಿರುವ ಎಲ್ಲಾ ಯುವತಿಯರಲ್ಲಿ ಒಬ್ಬಳನ್ನು ಆಯ್ಕೆ ಮಾಡಲು ಅವಕಾಶ ಕೊಡಿ ಎನ್ನುವ ಬೇಡಿಕೆಯಿಟ್ಟಿದ್ದಾನೆ ಎಂದು ವಧು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ವಧುವಿನ ಪೋಷಕರು ವಿವಾಹವನ್ನು ರದ್ದುಗೊಳಿಸಿದ್ದು, ವಿವಾಹ ಕಾರ್ಯಕ್ರಮಕ್ಕಾಗಿ ಮಾಡಿದ ವೆಚ್ಚವನ್ನು ವರನ ಕಡೆಯವವರು ಭರಿಸುವಂತೆ ಕೋರಿದ್ದಾರೆ.
 
ರಾಜಸ್ಥಾನದ ಭರತ್‌ಪುರ್ ಜಿಲ್ಲೆಯ ನಿವಾಸಿಯಾಗಿರುವ ವರನ ಕುಟುಂಬ, ವಧುವಿನ ಪೋಷಕರಿಗೆ ವಿವಾಹ ಕಾರ್ಯಕ್ರಮದ ವೆಚ್ಚ ಭರಿಸಿ ವಧುವಿಲ್ಲದೇ ತೆರಳಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments