Webdunia - Bharat's app for daily news and videos

Install App

ಬಿಜೆಪಿ, ಆರ್‌ಎಸ್ಸೆಸ್ ಮುಖಂಡರು ಬಳಸುವ ಪದ ನಿಮಗೆ ತಿಳಿದಿಲ್ಲವೇ: ದಿಗ್ವಿಜಯ್ ಪ್ರಶ್ನೆ

Webdunia
ಮಂಗಳವಾರ, 16 ಸೆಪ್ಟಂಬರ್ 2014 (19:20 IST)
" ಲವ್ ಜಿಹಾದ್ ಎನ್ನುವುದು ನಿಮಗೆ ತಿಳಿದಿಲ್ಲವೆಂದರೆ ಹೇಗೆ?" ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಕೇಳಿದ ಪ್ರಶ್ನೆಯಾಗಿತ್ತು. ಬಿಜೆಪಿ ಮತ್ತು ವಿಶ್ವಹಿಂದು ಪರಿಷದ್ ಮುಂತಾದ ಸಂಘಟನೆಗಳು ಲವ್ ಜಿಹಾದ್ ವಿರುದ್ಧ ನಡೆಸುತ್ತಿರುವ  ಅಭಿಯಾನವನ್ನು ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಗೃಹಸಚಿವರು ನೀಡಿದ ಪ್ರತಿಕ್ರಿಯೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 
 
"ಲವ್ ಜಿಹಾದ್ ಎಂದರೇನು? ಅದರ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ" ಎಂದು ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದರು. ದಿಗ್ವಿಜಯ ಬರೆದಿರುವ ಪತ್ರದಲ್ಲಿ, "ಲವ್ ಜಿಹಾದ್ ಎಂದರೇನೆಂದು ಗೊತ್ತಿಲ್ಲವೆಂದು ಹೇಳಿದ್ದೀರಿ. ನಿಮ್ಮ ತವರು ರಾಜ್ಯದಲ್ಲಿ ಬಿಜೆಪಿ, ವಿಎಚ್‌ಪಿ ಮತ್ತು ಆರ್‌ಎಸ್ಎಸ್ ಮುಖಂಡರು ಬಳಸುವ ಪದದ ಬಗ್ಗೆ ನಿಮಗೆ ಅರಿವಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.
 
ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಗುರುವಾಗಿದ್ದು, ವಿಎಚ್‌ಪಿ ಸೇರಿ ರಾಷ್ಟ್ರೀಯ ಸಂಘಟನೆಗಳ ಕೂಟದ ನೇತೃತ್ವ ವಹಿಸಿದೆ.  "ಇಂದಿನ ದಿನಗಳಲ್ಲಿ ನೀವು ಪಾಂಚಜನ್ಯ ಮತ್ತು ಆರ್ಗನೈಸರ್(ಆರ್‌ಎಸ್‌ಎಸ್ ಮುಖವಾಣಿಗಳು)  ಓದುತ್ತಿಲ್ಲ ಎನಿಸುತ್ತಿದೆ. ಮುಖಪುಟದ ಲೇಖನಗಳು ಲವ್ ಜಿಹಾದ್ ಕುರಿತು ಬರೆದಿವೆ" ಎಂದು ದಿಗ್ವಿಜಯ್ ಪತ್ರದಲ್ಲಿ ತಿಳಿಸಿದ್ದರು. 
 
ನಿಮ್ಮ ಪಕ್ಷದ ಯೋಗಿ ಆದಿತ್ಯನಾಥ್ ವಿರುದ್ಧ ಚುನಾವಣೆ ಆಯೋಗ ಕಟ್ಟುಪಾಡುಗಳನ್ನು ವಿಧಿಸಿದ್ದು ನಿಮಗೆ ಗೊತ್ತಿಲ್ಲವೆಂದು ಕಾಣುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವರದಿಗಾರರ ಜೊತೆ ಮಾತನಾಡುತ್ತಿದ್ದ ದಿಗ್ವಿಜಯ್, ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷರು ಅದನ್ನು ರಾಜ್ಯದಲ್ಲಿ ದೊಡ್ಡ ವಿಷಯವಾಗಿ ಬಿಂಬಿಸಿರುವಾಗ,  ರಾಜನಾಥ್ ಅವರಿಗೆ ಲವ್ ಜಿಹಾದ್ ಗೊತ್ತಿಲ್ಲದಿರುವುದು ಅಚ್ಚರಿಯಾಗಿದೆ ಎಂದು ಹೇಳಿದ್ದರು. ಹಿಂದು ಮಹಿಳೆಯರ ಶೀಲಭಂಗ ಮಾಡಿ ಮತಾಂತರ ಮಾಡುವ  ತಂತ್ರವನ್ನು ಬಲಪಂಥೀಯ ಗುಂಪುಗಳು ಲವ್ ಜಿಹಾದ್ ಎಂಬ ಪದ ಬಳಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments