Webdunia - Bharat's app for daily news and videos

Install App

ನನಗೆ ಕತ್ತೆಯೇ ಸ್ಪೂರ್ತಿ: ಅಖಿಲೇಶ್ ಯಾದವ್ ಗೆ ಪ್ರಧಾನಿ ಮೋದಿ ತಿರುಗೇಟು

Webdunia
ಶುಕ್ರವಾರ, 24 ಫೆಬ್ರವರಿ 2017 (09:27 IST)
ನವದೆಹಲಿ:  ಗುಜರಾತ್ ನ ಕತ್ತೆಗಳು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಕತ್ತೆಗೆ ಹೋಲಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಮೋದಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

 
ಕೆಲಸ ಮಾಡಲು ನನಗೆ ಕತ್ತೆಯೇ ಸ್ಪೂರ್ತಿ ಎಂದಿದ್ದಾರೆ. “ಕೆಲವರಿಗೆ ಕತ್ತೆಯೆಂದರೆ ಇಷ್ಟವಿಲ್ಲ. ಆದರೆ ನಮ್ಮ ಗುಜರಾತ್ ನಲ್ಲಿ ಕತ್ತೆಗಳನ್ನೂ ಸಿಂಹದಂತೇ ಸಂರಕ್ಷಿಸುತ್ತೇವೆ. ಕತ್ತೆ ನಮಗೆ ಆದರ್ಶ ಪ್ರಾಣಿ. ಅದು ತನ್ನ ಯಜಮಾನನ ಮಾತನ್ನು ಪಾಲಿಸುತ್ತದೆ. ಬಿಸಿಲು, ಮಳೆ, ಚಳಿಯೆನ್ನದೆ ಕಠಿಣ ಪರಿಶ್ರಮ ಪಡುತ್ತದೆ. ನನಗೆ ಕಠಿಣ ಪರಿಶ್ರಮ ಪಡಲು ಕತ್ತೆಯೇ ಸ್ಪೂರ್ತಿ” ಎಂದು ಮೋದಿ ಚುನಾವಣಾ ಭಾಷಣದಲ್ಲಿ ತಿರುಗೇಟು ನೀಡಿದ್ದಾರೆ.

ಇಷ್ಟೇ ಅಲ್ಲದೆ ಮೋದಿ ಕತ್ತೆಯ ಪ್ರಾಮಾಣಿಕತೆ ಬಗ್ಗೆ ಸ್ಥಳೀಯ ಬರಹಗಾರರೊಬ್ಬರು ಬರೆದ ಕವಿತೆಯನ್ನೂ ಓದಿದರು. ಗುಜರಾತ್ ಪ್ರವಾಸೋದ್ಯಮ ಪ್ರಚಾರ ಮಾಡುವ ಅಮಿತಾಬ್ ಬಚ್ಚನ್ ರನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಗುಜರಾತ್ ನ ಕತ್ತೆಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಇದಕ್ಕೆ ಮೋದಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments