ಹಿಮಪಾತಕ್ಕೆ ಬಿದ್ದ ಯಜಮಾನನಿಗೆ ಕಾವಲಾಗಿ ಎರಡು ದಿನ ನಿಂತ ನಾಯಿ!

Krishnaveni K
ಗುರುವಾರ, 8 ಫೆಬ್ರವರಿ 2024 (16:46 IST)
ನವದೆಹಲಿ: ನಾಯಿ ಎಂದರೆ ವಿಧೇಯತೆಗೆ ಇನ್ನೊಂದು ಹೆಸರು. ಅದನ್ನು ಈ ನಾಯಿ ನಿಜ ಮಾಡಿದೆ. ಜರ್ಮನ್ ಶೆಫರ್ಡ್  ವರ್ಗಕ್ಕೆ ಸೇರಿದ ಈ ನಾಯಿ ಹಿಮಪಾತಕ್ಕೆ ಬಿದ್ದು ಸಾವನ್ನಪ್ಪಿದ ತನ್ನ ಯಜಮಾನ ಮತ್ತು ಆತನ ಸ್ನೇಹಿತನನ್ನು 48 ಗಂಟೆಗಳ ಕಾಲ ಕಾದಿದೆ.

ಮಹಾರಾಷ್ಟ್ರ ಮೂಲದವರಾದ ಅಭಿನಂದನ್ ಗುಪ್ತ ಮತ್ತು ಅವರ ಸ್ನೇಹಿತೆ ಪರ್ಣಿತಾ ಬಾಳಾ ಸಾಹೇಬ್ ಬೇಸ್ ಕ್ಯಾಂಪ್ ಗೆ ಮರಳುವಾಗ ಕಾಂಗ್ರಾದ ಬಿರ್-ಬಿಲ್ಲಿಂಗ್ ಪರ್ವತದಲ್ಲಿ ಸುಮಾರು 900 ಅಡಿ ಆಳದ ಹಿಮ ಪ್ರಪಾತಕ್ಕೆ ಬಿದ್ದಿದ್ದರು. ಅವರ ಜೊತೆ ನಾಯಿಯೂ ಇತ್ತು.

ಮೇಲೆ ಬರಲು ಪ್ರಯತ್ನಿಸಿದರೂ ಅಭಿನಂದನ್ ಮತ್ತು ಸ್ನೇಹಿತೆಗೆ ಮೇಲೆ ಬರಲು ಸಾಧ‍್ಯವಾಗಲಿಲ್ಲ. ತೀವ್ರ ಗಾಯಗೊಂಡಿದ್ದ ಇಬ್ಬರೂ ಸಾವನ್ನಪ್ಪಿದ್ದರು. ಆದರೆ ನಾಯಿ ಮಾತ್ರ ತನ್ನ ಯಜಮಾನನ್ನು ಬಿಟ್ಟುಬಿಡದೇ ರಕ್ಷಣಾ ಸಿಬ್ಬಂದಿ ಬರುವವರೆಗೂ ಅಲ್ಲಿಯೇ 48 ಗಂಟೆಗಳ ಕಾಲ ಕಳೆದಿತ್ತು. ಅಂತಹ ಚಳಿಯಲ್ಲೂ ಆಹಾರವಿಲ್ಲದೇ ಅಲ್ಲಾಡದೇ ಯಜಮಾನನಿಗಾಗಿ ನಾಯಿ ಕಾದು ಕುಳಿತಿದ್ದು ಅಚ್ಚರಿಯೇ ಸರಿ. ಬಳಿಕ ರಕ್ಷಣಾ ಸಿಬ್ಬಂದಿಗೆ ತನ್ನ ಯಜಮಾನನ ಇರುವಿಕೆ ತಿಳಿಸಿದ್ದೂ ನಾಯಿಯೇ. ರಕ್ಷಣಾ ಸಿಬ್ಬಂದಿಯನ್ನೇ ಹಿಂಬಾಲಿಸಿದ ನಾಯಿ ಯಜಮಾನನ ಮೃತದೇಹ ಹೊರತರುವವರೆಗೂ ಜೊತೆಗೇ ಸಾಥ್ ಕೊಟ್ಟಿತ್ತು.

ಬಳಿಕ ಅಭಿನಂದನ್ ಕುಟುಂಬಸ್ಥರು ಮೃತದೇಹಗಳ ಜೊತೆ ನಾಯಿಯನ್ನೂ ತಮ್ಮ ಜೊತೆಗೆ ಕರೆದೊಯ್ದಿದ್ದಾರೆ. ಈ ನಾಯಿಯ ಸಾಹಸಗಾಥೆಗೆ ರಕ್ಷಣಾ ಸಿಬ್ಬಂದಿ ಸಲಾಂ ಹೊಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments