ಸಂಶಯಪಿಶಾಚಿ ಪತಿ ಪತ್ನಿಗೆ ಏನ್ ಮಾಡ್ದ ಗೊತ್ತಾ?

Webdunia
ಮಂಗಳವಾರ, 12 ಡಿಸೆಂಬರ್ 2023 (11:17 IST)
ಮಕ್ಕಳು ಮಲಗಿದ್ದಾಗ ದಂಪತಿಗಳ ಮಧ್ಯೆ ವಾಗ್ವಾದ ನಡೆದು ಕೋಪದ ಭರದಲ್ಲಿ ಪತಿ ತನ್ನ ಪತ್ನಿಯ ತಲೆಯ ಮೇಲೆ ಕಬ್ಬಿಣದ ಮೊಳೆಯನ್ನು ಜಡಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
 
ಪತ್ನಿಯ ನಡತೆಯ ಬಗ್ಗೆ ಸಂಶಯಪಿಶಾಚಿಯಾಗಿದ್ದ ಪತಿಯೊಬ್ಬ ಪತ್ನಿಯ ತಲೆಯ ಮೇಲೆ 5 ಇಂಚ್‌ನ ಮೊಳೆಯನ್ನು ಜಡಿದ ವಿಚಿತ್ರ ಘಟನೆ ದಕ್ಷಿಣ ಪೂರ್ವ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
 
ವರದಿಗಳ ಪ್ರಕಾರ, ಘಟನೆಯ ನಂತರ 27 ವರ್ಷ ವಯಸ್ಸಿನ ಮಮತಾ ಕೋಮಾಗೆ ತಲುಪಿದ್ದು, ಆರೋಪಿ ಪತಿ ಪಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಟ್ಟೆಯಿಂದ ಪತ್ನಿಯ ಕಾಲು ಮತ್ತು ಕೈಗಳನ್ನು ಕಟ್ಟಿಹಾಕಿ ನಂತರ ಕಬ್ಬಿಣ ಮೊಳೆ ಮತ್ತು ಸುತ್ತಿಗೆಯನ್ನು ತಂದು ತಲೆಗೆ ಮೊಳೆಯನ್ನು ಸುತ್ತಿಗೆಯಿಂದ ಜಡಿದು ಮನೆಯ ಬಾಗಿಲನ್ನು ಹೊರಗಡೆಯಿಂದ ಹಾಕಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಮಕ್ಕಳು ರಾತ್ರಿಯಿಡಿ ಅಳುತ್ತಾ ಕುಳಿತಿವೆ. ಬೆಳಿಗ್ಗೆ ಮನೆಯ ಮಾಲೀಕ ಮಕ್ಕಳು ಅಳುತ್ತಿರುವುದನ್ನು ನೋಡಿದಾಗ ಘಟನೆಯ ಮಾಹಿತಿ ದೊರೆತಿದೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
 
ಆರೋಪಿ ಪಪ್ಪು ಉತ್ತರಪ್ರದೇಶದ ಇಥೇಹಾ ನಗರದವನಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಹತ್ಯೆ ಪ್ರಕರಣವನ್ನು ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಿ, ಇಲ್ಲಾಂದ್ರೆ ರಾಜೀನಾಮೆ ಕೊಡಿ: ಛಲವಾದಿ ನಾರಾಯಣಸ್ವಾಮಿ

ಪಂಜಾಬ್ ನಲ್ಲೇ 500 ಕೋಟಿ, ನಮ್ಮಲ್ಲಿ ಕಾಂಗ್ರೆಸ್ಸಿಗರು ಹೈಕಮಾಂಡ್ ಗೆ ಎಷ್ಟು ಕೊಡ್ತಾರೋ: ಆರ್ ಅಶೋಕ್

ಮುಂದಿನ ಸುದ್ದಿ
Show comments