ಡಿಎಂಕೆ ಶಾಸಕರು ಸದನಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸುತ್ತಿರುವುದರಿಂದ ಅವರನ್ನು ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಅಮಾನತ್ತುಗೊಳಿಸಿ ಸಭಾಪತಿ ಪಿ.ಧನಾಪಾಲ್ ಆದೇಶ ಹೊರಡಿಸಿದ್ದಾರೆ.
ಕಂದಾಯ ಇಲಾಖೆ ಸಚಿವ ಆರ್.ಬಿ.ಉದಯ್ ಕುಮಾರ್ ಹೇಳಿಕೆಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ ಡಿಎಂಕೆ ಶಾಸಕರು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು.
ಕಳೆದ ವರ್ಷ ರಾಜ್ಯದಲ್ಲಿ ಕಡಿಮೆ ಮಳೆಯಾಗಿದ್ದರಿಂದ ನೀರು ಮತ್ತು ಮೇವಿನ ಸಮಸ್ಯೆಎದುರಾಗಿದೆ.ಅದರೆ, ಸರಕಾರ ರೈತರಿಗೆ ಅಗತ್ಯವಾದ ಎಲ್ಲಾ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುನಾಮಿ ಎದುರಾಗಿದ್ದಾಗ ಡಿಎಂಕೆ ಸರಕಾರ ತೋರಿದ್ದಕಿಂದ ಹೆಚ್ಚಿನ ಕಾಳಜಿಯನ್ನು ಎಐಎಡಿಎಂಕೆ ಸರಕಾರ ತೋರಿದೆ ಎಂದು ಸಚಿವ ಉದಯ್ ಕುಮಾರ್ ನೀಡಿದ ಹೇಳಿಕೆ ವಿಪಕ್ಷಗಳನ್ನು ಕೆರಳಿಸಿತು.
ಸಚಿವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಡಿಎಂಕೆ ಶಾಸಕರು ತಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿ ಸದನದಲ್ಲಿ ಗದ್ದಲವೆಬ್ಬಿಸಿದರು.