Select Your Language

Notifications

webdunia
webdunia
webdunia
webdunia

ದೇಶವಿರೋಧಿ ಡಿಎಂಕೆಗಿಂತ ಶಶಿಕಲಾ ಉತ್ತಮ: ಸುಬ್ರಮಣಿಯನ್ ಸ್ವಾಮಿ

ದೇಶವಿರೋಧಿ ಡಿಎಂಕೆಗಿಂತ ಶಶಿಕಲಾ ಉತ್ತಮ: ಸುಬ್ರಮಣಿಯನ್ ಸ್ವಾಮಿ
ಚೆನ್ನೈ , ಶನಿವಾರ, 18 ಫೆಬ್ರವರಿ 2017 (14:40 IST)
ಪಳನಿಸ್ವಾಮಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆಯಲ್ಲಾದ ಗಲಾಟೆಗೆ ಕಿಡಿಕಾರಿರುವ ಬಿಜೆಪಿ ಹಿರಿಯ ನಾಯಕ, ಸುಬ್ರಮಣಿಯನ್ ಸ್ವಾಮಿ ಡಿಎಂಕೆ ಹಿಂಸಾತ್ಮಕ ಮತ್ತು ದೇಶವಿರೋಧಿ ಪಕ್ಷ. ಡಿಎಂಕೆಗೆ ಹೋಲಿಸಿದರೆ ಶಶಿಕಲಾ ಉತ್ತಮ ಎಂದು ಹೇಳಿದ್ದಾರೆ. 
 
ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದ್ದು, ಗುಪ್ತಮತದಾನಕ್ಕೆ ಆಗ್ರಹಿಸಿ ಡಿಎಂಕೆ ಶಾಸಕರು ನಡೆಸಿದ ಪ್ರತಿಭಟನೆ ತಾರಕಕ್ಕೇರಿದೆ.
 
ಸ್ಪೀಕರ್ ಧನಪಾಲ್ ಅವರು ಗುಪ್ತಮತದಾನಕ್ಕೆ ಅವಕಾಶ ನೀಡದೇ, ತಮ್ಮ ನಿರ್ಣಯವೇ ಅಂತಿಮ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಡಿಎಂಕೆ ಶಾಸಕರು ಏಕಾಏಕಿ ಸ್ಪೀಕರ್ ಅವರತ್ತ ನುಗ್ಗಿ, ಕೈಗೆ ಸಿಕ್ಕ  ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೆ, ಸ್ಪೀಕರ್ ಅವರ ಕುರ್ಚಿ ಮತ್ತು ಟೇಬಲ್ ಗಳನ್ನು ಧ್ವಂಸಗೊಳಿಸಿದರು.
 
ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವಾಸಮತಯಾಚನೆಯನ್ನು ಮೂರುಗಂಟೆ ಕಾಲ ಮುಂದೂಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನ ಬೈದರು, ಬಟ್ಟೆ ಹರಿದುಹಾಕಿದರು..ನಾನೇನು ಮಾಡಲಿ..: ಸ್ಪೀಕರ್ ಅಳಲು