Select Your Language

Notifications

webdunia
webdunia
webdunia
webdunia

ಡಿಕೆ ರವಿಯದ್ದು ಕೊಲೆಯಲ್ಲ, ಆತ್ಮಹತ್ಯೆ: ಸಿಬಿಐ ವರದಿ ಸಲ್ಲಿಕೆಗೆ ಸಿದ್ದತೆ

ಡಿಕೆ ರವಿಯದ್ದು ಕೊಲೆಯಲ್ಲ, ಆತ್ಮಹತ್ಯೆ: ಸಿಬಿಐ ವರದಿ ಸಲ್ಲಿಕೆಗೆ ಸಿದ್ದತೆ
ಬೆಂಗಳೂರು , ಭಾನುವಾರ, 4 ಅಕ್ಟೋಬರ್ 2015 (11:05 IST)
ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಕೊಲೆಯಾಗಿಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದು ಕೇಂದ್ರ ತನಿಖಾ ದಳ ಅಂತಿಮ ವರದಿ ಸಲ್ಲಿಕೆಗೆ ಸಿದ್ದತೆ ನಡೆಸಿದೆ. 
 
ಡಿಕೆ ರವಿ ಪ್ರಕರಣದ ಸಂಪೂರ್ಣ ತನಿಖೆ ಮುಗಿದಿದ್ದು ಅವರ ಸಾವಿನಲ್ಲಿ ಯಾರ ಕೈವಾಡವು ಇಲ್ಲ. ಅದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು ಮುಂಬರುವ ಕೆಲ ದಿನಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
 
ಜನಪ್ರಿಯ ಅಧಿಕಾರಿಯಾಗಿದ್ದ ರವಿ ಸಾವಿನ ಪ್ರಕರಣದ ಹಿಂದೆ ಹಲವರ ಕೈವಾಡವಿದೆ ಎನ್ನುವ ಸಾರ್ವಜನಿಕರ ಒತ್ತಡದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ತನಿಖೆಗಾಗಿ ಸಿಬಿಐಗೆ ಒಪ್ಪಿಸಿತ್ತು.
 
ಕಳೆದ ಮಾರ್ಚ್ 16ನೇ ತಾರೀಖಿನಂದು ರವಿ ಅವರ ಶವ ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು.
 
ದಕ್ಷ ಅಧಿಕಾರಿಯಾಗಿದ್ದ ರವಿ ತೆರಿಗೆಗಳ್ಳರ ವಿರುದ್ಧ ಭೂ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಹಲವಾರು ಬಾರಿ ಜೀವ ಬೆದರಿಕೆ ಕರೆಗಳು ಅವರಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರ ಹತ್ಯೆಯಾಗಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದರು.

Share this Story:

Follow Webdunia kannada