Select Your Language

Notifications

webdunia
webdunia
webdunia
webdunia

ಪ್ರೀತಿಪ್ರೇಮ ಬೇಡ, ಓದಿನ ಕಡೆ ಗಮನ ಕೊಡು ಎಂದ ಪಾಲಕರನ್ನು ಕೊಂದ 16ರ ಬಾಲಕಿ

ಪ್ರೀತಿಪ್ರೇಮ ಬೇಡ, ಓದಿನ ಕಡೆ ಗಮನ ಕೊಡು ಎಂದ ಪಾಲಕರನ್ನು ಕೊಂದ 16ರ ಬಾಲಕಿ
ವಡೋದರಾ , ಶನಿವಾರ, 18 ಅಕ್ಟೋಬರ್ 2014 (18:24 IST)
ಪ್ರಿಯಕರನಿಂದ ದೂರವಿರು, ಅಭ್ಯಾಸದ ಕಡೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ ತಂದೆತಾಯಿಗಳನ್ನು 16 ವರ್ಷದ ಅಪ್ರಾಪ್ತ ಮಗಳೇ ಕೊಲೆ ಮಾಡಿದ ಅಮಾನುಷ ಘಟನೆ ವಡೋದರಾದಲ್ಲಿ ನಡೆದಿದೆ. ತನ್ನ ಪ್ರಿಯಕರನ ಸಹಾಯದಿಂದ ಆಕೆ ಈ ಕುಕೃತ್ಯವನ್ನು ಎಸಗಿದ್ದಾಳೆ. 

ಈ ಅಪರಾಧ ಕೃತ್ಯ ನಡೆಸಿದ ನಂತರ ಆಕೆ ತನ್ನ ಗೆಳೆಯನ ಜತೆ ವಾಸಿಸತೊಡಗಿದಳು. ಘಟನೆ ನಡೆದ ಒಂದುವರೆ ತಿಂಗಳ ತರುವಾಯ ಕೊಲೆ ರಹಸ್ಯ ಬಹಿರಂಗಗೊಂಡಿದೆ. 
 
ಕೊಲೆ ಮಾಡಿದ ನಂತರ ಮೃತ ಶರೀರವನ್ನು ಕೋಣೆಯಲ್ಲವರು ಮುಚ್ಚಿಟ್ಟಿದ್ದಾರೆ.  ಹುಡುಗಿಯ ತಂದೆ ಶ್ರೀಹರಿ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕರಾಗಿದ್ದರೆ, ತಾಯಿ ಸಹ ಕೆಲಸದಲ್ಲಿದ್ದರು.  ತಮ್ಮ ಮಗಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕಾಗಿ ತಂದೆ ವಿಆರ್‌ಎಸ್ ತೆಗೆದುಕೊಂಡಿದ್ದರು. 
 
ಆಗಸ್ಟ್ 3 ರಂದು ಈ ಘಟನೆ ನಡೆದಿದ್ದು, ತನ್ನ ಪಾಲಕರ ಊಟದಲ್ಲಿ ವಿಷ ಬೆರೆಸಿದ ಹುಡುಗಿ ಅವರಿಬ್ಬರು ಪ್ರಜ್ಞೆ ತಪ್ಪಿದಾಗ ಹರಿತವಾದ ಆಯುಧದಿಂದ ಇರಿದು ಸಾಯಿಸಿದ್ದಾಳೆ. ಬಾಡಿಗೆದಾರರು  ಮೃತರ ಇತರ ಸಂಬಂಧಿಕರನ್ನು ಸಂಪರ್ಕಿಸಿದಾಗ ವಿಷಯ ಬಹಿರಂಗಗೊಂಡಿದೆ. 
 
ಮೃತ ಶರೀರಗಳನ್ನು ಕೋಣೆಯೊಂದರಲ್ಲಿ ಹಾಕಿದ ಆರೋಪಿಗಳು ಶವ ಕೊಳೆಯುವ ವಾಸನೆ  ಹೊರಗೆ ಹೋಗುವುದನ್ನು ತಡೆಯಲು ಎಸಿಯನ್ನು ಆನ್ ಮಾಡಿದರು. ಅವರ ದೇಹದ ಮೇಲೆ ಕ್ರಿಮಿನಾಶಕಗಳನ್ನು ಸಿಂಪಡಿಸಿದ ಆಕೆ , ಎಸಿಡ್ ಸಹ ಸುರಿದಿದ್ದಳು. 
 
 ಸತ್ಯ ಬಹಿರಂಗವಾದ ಬಳಿಕ  ಆಕೆಯನ್ನು ಮಹಿಳಾ ರಕ್ಷಣಾ ಗೃಹಕ್ಕೆ ಕಳುಹಿಸಲಾಯಿತು ಮತ್ತು ಆಕೆಯ ಗೆಳೆಯನನ್ನು ಬಂಧಿಸಲಾಯಿತು. ತನ್ನ ಗೆಳೆಯ  ತಲೆದಿಂಬಿನಿಂದ ಅವರಿಬ್ಬರ ಉಸಿರುಗಟ್ಟಿಸಿದ ನಂತರ ತಾನು ಇವರನ್ನು ಇರಿದು ಕೊಂದಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ. 
 
ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ  ಆಕೆಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಆಕೆ ಇಂಜಿನಿಯರ್- ಡಾಕ್ಟರ್ ಆಗಬೇಕೆಂಬುದು ಆಕೆಯ ತಂದೆತಾಯಿಗಳ ಹಂಬಲವಾಗಿತ್ತು. ಅವರಿಬ್ಬರು ಆಕೆಯ ಪ್ರೀತಿಗೆ ವಿರೋಧವಾಗಿದ್ದ. ಆದರೆ ಹುಡುಗಿ ತಾನು ಪ್ರೀತಿಸಿದ ಹುಡುಗನ ಜತೆ ಬಾಳ ಬಯಸಿದ್ದಳು. 

Share this Story:

Follow Webdunia kannada