Select Your Language

Notifications

webdunia
webdunia
webdunia
webdunia

ನಾಟಕ ನಿಲ್ಲಿಸಿ, ಗಡ್ಕರಿ ಭ್ರಷ್ಟತೆ ಬಯಲಿಗೆಳೆಯಲು ಸಹಾಯ ಮಾಡಿ: ಕೇಜ್ರಿಗೆ ದಿಗ್ವಿಜಯ್

ನಾಟಕ ನಿಲ್ಲಿಸಿ, ಗಡ್ಕರಿ ಭ್ರಷ್ಟತೆ ಬಯಲಿಗೆಳೆಯಲು ಸಹಾಯ ಮಾಡಿ: ಕೇಜ್ರಿಗೆ ದಿಗ್ವಿಜಯ್
ನವದೆಹಲಿ , ಗುರುವಾರ, 22 ಮೇ 2014 (18:22 IST)
ಬಿಜೆಪಿ ನಾಯಕ ನಿತಿನ್ ಗಡ್ಕರಿ ಕುರಿತಾದ ಭ್ರಷ್ಟಾಚಾರಗಳನ್ನು ಬಹಿರಂಗಗೊಳಿಸಲು ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಲ್ಲಿ ಕೋರಿದ್ದಾರೆ. 
 
ನಾಟಕವನ್ನು ಮಾಡುವ ಬದಲಾಗಿ ಗಡ್ಕರಿ ಕುರಿತಾದ ಸತ್ಯವನ್ನು ಬಹಿರಂಗಗೊಳಿಸಲು ತನ್ನ ಜತೆ ಕೈ ಜೋಡಿಸಬೇಕೆಂದು ಸಿಂಗ್ ಟ್ವಿಟ್ ಮಾಡಿದ್ದಾರೆ. 
 
ತನ್ನನ್ನು ದೇಶದ ಅತಿ ಭೃಷ್ಟ ಎಂದು ಹೀಗಳೆದಿದ್ದಕ್ಕಾಗಿ ಗಡ್ಕರಿ ಕೇಜ್ರಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಆ ಕಾರಣ ಆಪ್ ನಾಯಕನನ್ನು ಪೋಲಿಸರು ಬಂಧಿಸಿದ್ದು, ಜಾಮೀನು ಪಡೆಯಲು ನಿರಾಕರಿಸಿದ್ದರಿಂದ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. 

Share this Story:

Follow Webdunia kannada