Webdunia - Bharat's app for daily news and videos

Install App

ದಿವ್ಯಾಂಗ ಮಗುವನ್ನೆತ್ತಿಕೊಂಡು ರಾಮಾಯಣ ಹೇಳಿಸಿದ ಮೋದಿ( ವೈರಲ್ ವಿಡಿಯೋ)

Webdunia
ಸೋಮವಾರ, 19 ಸೆಪ್ಟಂಬರ್ 2016 (12:45 IST)
ಶನಿವಾರ ತಮ್ಮ 66 ನೇ ಜನ್ಮದಿನವನ್ನಾಚರಿಸಿಕೊಂಡ ಪ್ರಧಾನಿ ಮೋದಿ ದಿವ್ಯಾಂಗ ಮಕ್ಕಳ ಜತೆ ದಿನ ಕಳೆದಿದ್ದು ನಿಮಗ ಗೊತ್ತೇ ಇರಲಿಕ್ಕೆ ಸಾಕು. ಅದು ಮೋದಿ ಅವರು ಪುಟ್ಟ ಮಗುವನ್ನು ಎತ್ತಿಕೊಂಡು ಮಾತನಾಡಿಸಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 

ನವಸಾರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ದಿವ್ಯಾಂಗರಿಗೆ ಕಿಟ್ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ದೃಷ್ಟಿ ದೋಷವಿದ್ದ ಪುಟ್ಟ ಮಗು ಗೌರಿ ಶಾರ್ದೂಲ್‌ಳನ್ನು ಎತ್ತಿಕೊಂಡ ಪ್ರಧಾನಿ ಆಕೆಯನ್ನು ವಾತ್ಸಲ್ಯದಿಂದ ಮಾತನಾಡಿಸಿ ರಾಮಾಯಣವನ್ನು ಹೇಳುವಂತೆ, 'ಬೋಲೋ ಬೇಟಾ ಬೋಲ್'( ಹೇಳು ಕಂದ ಹೇಳು) ಎಂದು ಹುರಿದುಂಬಿಸಿದರು.
 
ಧ್ವನಿವರ್ಧಕದ ಮುಂದೆ ಮೋದಿ ಅವರ ಮಡಿಲಲ್ಲಿ ನಿಂತಿದ್ದ ಮಗು,'ನನ್ನ ಹೆಸರು ಗೌರಿ, ನಾನು ಪೂಜಾ ಮತ್ತು ಯೋಗಿ ರಾಜ್ ಎಂಬುವವರ ಮಗಳಾಗಿದ್ದು ಒಂದನೆಯ ತರಗತಿಯಲ್ಲಿ ಓದುತ್ತಿದ್ದೇನೆ ಎಂದು ಹೇಳಿದಳು. ಬಳಿಕ ಪ್ರಧಾನಿ ಅವರ ಮಾತಿಗೆ ಒಪ್ಪಿ ರಾಮಾಯಣವನ್ನು ಸಹ ಪಟಪಟನೆ ಹೇಳಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದಳು. 
 
ಬಳಿಕ ಮಾತನಾಡಿದ ಪ್ರಧಾನಿ ಈ ದಿನವನ್ನು ದಿವ್ಯಾಂಗರ ಜತೆ ಕಳೆಯುತ್ತಿರುವುದು ನನ್ನ ಅದೃಷ್ಟ. ಈ ಮೊದಲು ಪ್ರಧಾನಿಯೊಬ್ಬರು ಈ ರೀತಿ ಮಾಡಿದ್ದರೇ? ಎಂದು ಗುಜರಾತಿಯಲ್ಲಿ ನೆರೆದವರನ್ನು ಪ್ರಶ್ನಿಸಿದರು. 
 
'ದಿವ್ಯಾಂಗರನ್ನು ಅನುಕಂಪದಿಂದ ನೋಡಬೇಡಿ. ಅವರಿಗೂ ಆತ್ಮಗೌರವವಿದೆ, ಅವರು ಸಮಾನತೆಗೆ ಹಕ್ಕುದಾರರು', ಎಂದ ಪ್ರಧಾನಿ 'ಹೆಣ್ಣುಮಕ್ಕಳ ವಿಷಯದಲ್ಲೂ ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಿ', ಎಂದರು.  ಜತೆಗೆ ಸಂಕೇತ ಭಾಷೆಯಲ್ಲಿ ಸಾರ್ವತ್ರಿಕ ಪಠ್ಯಕ್ರಮವನ್ನು ಸಹ ಅವರು ಘೋಷಿಸಿದರು. 
 
ಶನಿವಾರ ನಡೆದ ಕಾರ್ಯಕ್ರಮದಲ್ಲಿ 11,232 ದಿವ್ಯಾಂಗರಿಗೆ ಗಾಲಿಕುರ್ಚಿ, ಟ್ರೈ- ಸೈಕಲ್ಸ್, ಸ್ಮಾರ್ಟ್ ಸ್ಟಿಕ್ಸ್, ಸ್ಮಾರ್ಟ್ ಫೋನ್, ಬುದ್ಧಿಮಾಂದ್ಯರಿಗೆ ವಿಶೇಷ ಸಾಫ್ಟವೇರ್‌ಗಳುಳ್ಳ ಲ್ಯಾಪ್‌ಟಾಪ್, ಬ್ರೈಲ್ ಲಿಪಿಗಳು, ಕ್ಯಾಲಿಪರ್ಸ್ ಏಡ್ ಮತ್ತು ಇತರೇ ಉಪಕರಣಗಳನ್ನು ನೀಡಲಾಯಿತು. ಈ ಮೂಲಕ 3 ವಿಶ್ವ ದಾಖಲೆಗಳನ್ನು ದಾಖಲಿಸಲಾಗಿದೆ. 

ದಿವ್ಯಾಂಗ ಮಗುವನ್ನೆತ್ತಿಕೊಂಡು ರಾಮಾಯಣ ಹೇಳಿಸಿದ ಮೋದಿ( ವೈರಲ್ ವಿಡಿಯೋ)

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ಗೆ ಉನ್ನತ ಸ್ಥಾನ ಸಿಗಬೇಕು: ರಂಭಾಪುರಿ ಸ್ವಾಮೀಜಿ

ಸದ್ಯದಲ್ಲೇ ಸಿದ್ದರಾಮಯ್ಯ ದೆಹಲಿಗೆ ವರ್ಗಾವಣೆ ಪಕ್ಕಾ: ಬಿವೈ ವಿಜಯೇಂದ್ರ

ಸಂದೇಶ್‌ಖಾಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ: ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ಗೆ ಶಾಕ್‌

ಕೌಟುಂಬಿಕ ಕಲಹದಿಂದ ಬೇಸತ್ತು ಲಾಡ್ಜ್‌ನಲ್ಲೇ ಸಾವಿಗೆ ಶರಣಾದ ದಾವಣಗೆರೆಯ ಸಬ್‌ ಇನ್‌ಸ್ಪೆಕ್ಟರ್‌

ಸಿಎಂ ಬದಲಾವಣೆ ಕೂಗಿನ ಬೆನ್ನಲ್ಲೇ ಸಿದ್ದರಾಮಯ್ಯಗೆ ಎಐಸಿಸಿಯಲ್ಲಿ ಹೊಸ ಜವಾಬ್ದಾರಿ: ಏನಿದು ಲೆಕ್ಕಾಚಾರ

ಮುಂದಿನ ಸುದ್ದಿ
Show comments