Webdunia - Bharat's app for daily news and videos

Install App

ಬ್ಯಾಂಕ್‌, ಎಟಿಎಂಗಳಲ್ಲಿ ಸರದಿಗೆ ನಿಂತ ಜನರನ್ನು ಲೇವಡಿ ಮಾಡಿದ ಬಿಜೆಪಿ ಮುಖಂಡ

Webdunia
ಗುರುವಾರ, 5 ಜನವರಿ 2017 (14:25 IST)
ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಸರದಿಗಾಗಿ ನಿಂತ ಜನರನ್ನು ಲೇವಡಿ ಮಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ದೆಹಲಿಯ ಪ್ರವಾಸೋದ್ಯಮ ಮತ್ತು ಸಂಸ್ಕ್ರತಿ ಖಾತೆ ಸಚಿವರಾದ ಕಪಿಲ್ ಮಿಶ್ರಾ ಒತ್ತಾಯಿಸಿದ್ದಾರೆ.
 
ವಿಡಿಯೋವೊಂದರಲ್ಲಿ ಮನೋಜ್ ತಿವಾರಿ ಹಾಡು ಹಾಡುತ್ತಾ, ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸರದಿಗಾಗಿ ನಿಂತಿದ್ದ ಜನರನ್ನು ಲೇವಡಿ ಮಾಡಿದ್ದರು.
 
ನೋಟು ನಿಷೇಧದಿಂದಾಗಿ  ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸರದಿಗಾಗಿ ನಿಂತಿದ್ದ ಜನರನ್ನು ಲೇವಡಿ ಮಾಡಿ ದೇಶಭಕ್ತಿಯ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡುವುದು ಎಷ್ಟು ಸುಲಭ ಎಂದು ಬಿಜೆಪಿ ಮುಖಂಡ ಮನೋಜ್ ತಿವಾರಿ ನೀಡಿದ ಹೇಳಿಕೆಯ ವಿಡಿಯೋ ದೇಶಾದ್ಯಂತ ಜನತೆಯಲ್ಲಿ ಆಕ್ರೋಶ ಮೂಡಿಸಿದೆ.
 
ದೆಹಲಿ ವಿಧಾನಸಭೆಯ ವಿಪಕ್ಷ ನಾಯಕರಾದ ವಿಜೇಂದರ್ ಗುಪ್ತಾ ಸೇರಿದಂತೆ ಹಲವಾರು ನಾಯಕರು ತಿವಾರಿ ಅವರ ಲೇವಡಿಗೆ ಚಪ್ಪಾಳೆ ತಟ್ಟುತ್ತಾ ನಾಚಿಕೆಗೇಡಿಗಳಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ಮುಖಂಡ, ಪ್ರವಾಸೋದ್ಯಮ ಖಾತೆ ಸಚಿವ ಕಪಿಲ್ ಮಿಶ್ರಾ ಟ್ವಿಟ್ ಮಾಡಿ ಸಹೋದರ ಬಿಜೆಪಿ ಮುಖಂಡ ಮನೋಜ್ ತಿವಾರಿ ನಿಮ್ಮ ವರ್ತನೆ ದೇಶದ ಜನತೆಗೆ ಅಗೌರವ ತರುವಂತಹದು, ನೋವು ತರುವಂತಹದು ಮತ್ತು ಅಸ್ವೀಕಾರಾರ್ಹವಾಗಿದೆ ಎಂದು ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ಚಾಮುಂಡಿ ಆಷಾಢ ಶುಕ್ರವಾರ ದರ್ಶನಕ್ಕೆ 2000 ರೂ: ಜನರಿಂದ ಆಕ್ರೋಶ

ಅಹಮದಾಬಾದ್ ವಿಮಾನ ದುರಂತ: 11ಎ ಸೀಟ್ ಬುಕಿಂಗ್ ಗೆ ಹೆಚ್ಚಿ ಡಿಮ್ಯಾಂಡ್

Arecanut price today: ಆರಕ್ಕೇರದ ಮೂರಕ್ಕಿಳಿಯದ ಅಡಿಕೆ, ರೈತರಿಗೆ ನಿರಾಸೆ

Gold Price today: ಚಿನ್ನದ ಬೆಲೆ ಏರಿಕೆ ನಡುವೆ ಇಂದು ಕೊಂಚ ರಿಲೀಫ್

Viral video: ಸೈಕ್ಲಿಂಗ್ ಮಾಡಲು ಹೋಗಿ ದಢಾರನೆ ಬಿದ್ದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments