Webdunia - Bharat's app for daily news and videos

Install App

ನವದೆಹಲಿ: ದರೋಡೆಕೋರರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದ ಯುವತಿಗೆ ಸನ್ಮಾನ

Webdunia
ಮಂಗಳವಾರ, 29 ಜುಲೈ 2014 (13:02 IST)
ತನ್ನ ಮೊಬೈಲ್ ಪೋನ್ ಮತ್ತು ಪರ್ಸ್‌ನ್ನು ಕದ್ದ ಕಳ್ಳರ ಬೆನ್ನಟ್ಟಿದ್ದ 24 ವರ್ಷದ ಯುವತಿಯೊಬ್ಬಳು  ಆರೋಪಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿ ಸಾಹಸ ಮೆರೆದ ಅಪರೂಪದ ಘಟನೆ ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ಜರುಗಿದೆ. 

ಆಕೆಯ ಧೈರ್ಯವನ್ನು ಶ್ಲಾಘಿಸಿರುವ ದೆಹಲಿ ಪೋಲಿಸರು, ಈ ಶೌರ್ಯಕ್ಕಾಗಿ ಆಕೆಯನ್ನು ಸನ್ಮಾನಿಸ ಬಯಸಿದ್ದಾರೆ. 
 
ಉತ್ತಮನಗರದ ನಿವಾಸಿಯಾಗಿರುವ ಅಂಕಿತಾ ಶನಿವಾರ ಸಂಜೆ ಖಾಸಗಿ ಬಸ್ ಮೂಲಕ ಮನೆಗೆ ವಾಪಸ್ಸಾಗುತ್ತಿದ್ದಳು. ಅದೇ ಬಸ್ಸಿನ ಬಾಗಿಲಲ್ಲಿ ನಿಂತಿದ್ದ ನಾಲ್ಕು ಜನ ದರೋಡೆಕೋರರು ಆಕೆಯ ಮೊಬೈಲ್ ಮತ್ತು ಪರ್ಸ್‌ನ್ನು ಕಸಿದುಕೊಂಡು ಚಲಿಸುತ್ತಿದ್ದ ಬಸ್ಸಿನಿಂದ ಹಾರಿದ್ದಾರೆ. 
 
ತಕ್ಷಣ ಬಸ್ ನಿಲ್ಲಿಸುವಂತೆ ಚಾಲಕರ ಬಳಿ ಹೇಳಿದ ಅಂಕಿತಾ ಕಳ್ಳರ ಬೆನ್ನಟ್ಟಿ ಓಡಿದ್ದಾಳೆ. ಇಬ್ಬರು ಆರೋಪಿಗಳನ್ನು  ಹಿಡಿಯುವಲ್ಲಿ ಆಕೆ ಸಫಲಳಾಗಿದ್ದು, ಉಳಿದವರಿಬ್ಬರು ಪರಾರಿಯಾಗಿದ್ದಾರೆ. 
 
ಸಹ ಪ್ರಯಾಣಿಕರ ಸಹಾಯದಿಂದ ಅವರಿಬ್ಬರನ್ನು ಆಕೆ ಪೋಲಿಸರಿಗೆ ವಶಕ್ಕೆ ಒಪ್ಪಿಸಿದ್ದು ಅವರಲ್ಲಿ ಒಬ್ಬನನ್ನು ಸೋನು (22) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಅಪ್ರಾಪ್ತನಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಕಳ್ಳರಿಂದ ಅಂಕಿತಾ ಪರ್ಸ್ ಮತ್ತು ಮೊಬೈಲ್ ಪೋನ್ ವಶಪಡಿಸಿಕೊಂಡಿರುವ ಪೋಲಿಸರು  ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 
 
ಜತೆಗೆ ಅಂಕಿತಾಳ ಸಾಹಸಕ್ಕೆ ಪ್ರತಿಯಾಗಿ ಅವರನ್ನು ಸನ್ಮಾನಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments