ಆಟೋ ಚಾಲಕ ಬಾಬು ಸಿಂಗ್ ಎಂಬಾತನೇ ಕೊಲೆಗೈದ ದುರ್ದೈವಿಯಾಗಿದ್ದು, ರೋಹಿಣಿ ಪ್ರದೇಶದ ನಿವಾಸವೊಂದರಲ್ಲಿ ಘಟನೆ ನಡೆದಿದೆ.
ಪೋಲಿಸರ ಪ್ರಕಾರ ಕುಡಿದ ಅಮಲಿನಲ್ಲಿದ್ದ ಬಾಬು ಸಿಂಗ್ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಪತ್ನಿಯ ಮೇಲೆ ದಾಳಿ ಮಾಡಿದ. ಇದರಿಂದ ಕೆರಳಿದ ಮಗ ಚಾಕುವೊಂದನ್ನು ತೆಗೆದುಕೊಂಡು ತಂದೆಗೆ ಹಲವು ಬಾರಿ ಇರಿದಿದ್ದಾನೆ.
ತಕ್ಷಣ ನೆರೆಮನೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ತೀವೃ ಗಾಯ ಮತ್ತು ರಕ್ತಸ್ರಾವದಿಂದ ನರಳುತ್ತಿದ್ದ ಬಾಬುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.