Webdunia - Bharat's app for daily news and videos

Install App

6 ತಿಂಗಳಲ್ಲಿ ಮೂರು ಕಾನೂನು ಮಂತ್ರಿಗಳನ್ನು ಕಂಡ ದೆಹಲಿ

Webdunia
ಮಂಗಳವಾರ, 1 ಸೆಪ್ಟಂಬರ್ 2015 (15:15 IST)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಪಿಲ್ ಮಿಶ್ರಾ ನಿರ್ವಹಿಸುತ್ತಿದ್ದ ಕಾನೂನು ಖಾತೆಯನ್ನು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರಿಗೆ ಹಸ್ತಾಂತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಕಳೆದ 6 ತಿಂಗಳಲ್ಲಿ ದೆಹಲಿ ಮೂವರು ಕಾನೂನು ಸಚಿವರನ್ನು ಕಾಣುವಂತಾಗಿದೆ.
 

 
ಕಾನೂನು ಖಾತೆ ಹೊಣೆ ಹೊತ್ತಿದ್ದ ಜಿತೇಂದ್ರ ತೋಮರ್ ನಕಲಿ ಕಾನೂನು ಪದವಿ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದರಿಂದ ಕಳೆದ ಜೂನ್ ತಿಂಗಳಲ್ಲಿ ಮಿಶ್ರಾ ಅವರಿಗೆ ಕಾನೂನು ಖಾತೆ ಜವಾಬ್ದಾರಿಯನ್ನು ವಹಿಸಲಾಗಿತ್ತು. 
 
ಮೂಲಗಳ ಪ್ರಕಾರ ಮಿಶ್ರಾರ ಅತ್ಯುತ್ಸಾಹ ಶೈಲಿಯ ಕಾರ್ಯನಿರ್ವಹಣೆಯೇ ಅವರನ್ನು ಈ ಮಹತ್ವದ ಪದದಿಂದ ಹೊರ ಹೋಗುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಿಶ್ರಾ ದೆಹಲಿ ಜಲ ಮಂಡಳಿ (DJB) ನೀರಿನ ಟ್ಯಾಂಕರ್ ನಿರ್ವಹಣೆ, ವಿತರಣೆ ವ್ಯವಸ್ಥೆಯ ಮೇಲೆ ಮಾಡಿದ್ದ ಸತ್ಯಶೋಧನೆ ವರದಿಯನ್ನಾಧರಿಸಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್ ಅವರ ಮೇಲೆ ಎಫ್ಐಆರ್ ದಾಖಲಿಸುವಂತೆ ಮಿಶ್ರಾ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದರು.  ದೆಹಲಿ ಸರ್ಕಾರ ಈ ವರದಿಯನ್ನು ಬಹಿರಂಗ ಪಡಿಸುವ ಮುನ್ನವೇ ಮಿಶ್ರಾ ಧಾವಂತವನ್ನು ಪ್ರದರ್ಶಿಸಿದ್ದರು. 
 
"ನಾನು ಬಹುದೊಡ್ಡ ಸಂಗತಿಯನ್ನು ಬಹಿರಂಗ ಮಾಡಿದ್ದೇನೆ. ನನ್ನ ಈ ನಡೆಯ ಪರಿಣಾಮ ಸಚಿವ ಸ್ಥಾನದಿಂದ ಕೂಡ ನನ್ನನ್ನು ಕೆಳಗಿಳಿಸುವ ಸಾಧ್ಯತೆ ಇದೆ", ಎಂದು ಮಿಶ್ರಾ ಈ ಸಹ ಈ ಪತ್ರ ಬರೆದಾಗಲೇ ಹೇಳಿಕೊಂಡಿದ್ದರು.
 
ಆಪ್ ಸರ್ಕಾರದಲ್ಲಿ ಕಾನೂನು ಸಚಿವರು ಸದಾ ವಿವಾದಗಳಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಆಪ್ ಈ ಹಿಂದೆ 49 ದಿನಗಳ ಆಡಳಿತ ನಡೆಸಿದ್ದಾಗ ಸೋಮನಾಥ್ ಭಾರ್ತಿ ಕಾನೂನು ಖಾತೆಯನ್ನು ಸಂಭಾಳಿಸಿದ್ದರು. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ನೈಜಿರಿಯನ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಮಧ್ಯರಾತ್ರಿ ರೈಡ್ ನಡೆಸಿ ಭಾರ್ತಿ ಸಹ ವಿವಾದಕ್ಕೆ ಗುರಿಯಾಗಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments