Webdunia - Bharat's app for daily news and videos

Install App

ಸರ್ಜಿಕಲ್ ಸ್ಟ್ರೈಕ್: ಪ್ರಧಾನಿ ಮೋದಿಗೆ ಅಭಿನಂದಿಸಿ ನಿರ್ಣಯ ಮಂಡನೆ ಮಾಡಿದ ಕೇಜ್ರಿ ಸರ್ಕಾರ

Webdunia
ಶನಿವಾರ, 1 ಅಕ್ಟೋಬರ್ 2016 (17:13 IST)
ಸರ್ಜಿಕಲ್ ಸ್ಟ್ರೈಕ್ ( ನಿರ್ದಿಷ್ಟ ದಾಳಿ) ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯವನ್ನು ಮಂಡಿಸಿತು. 
ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರೇರಿತ ಉಗ್ರ ದಾಳಿಯನ್ನು ಖಂಡಿಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಾವು ಪ್ರಧಾನಿ, ಕೇಂದ್ರ ಸರ್ಕಾರ, ಕೇಂದ್ರೀಯ ಗೃಹಮಂತ್ರಿ, ರಕ್ಷಣಾ ಮಂತ್ರಿ ಮತ್ತು ಸೇನೆಯ ಪ್ರಮುಖರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ನಿರ್ಣಯವನ್ನು ಮಂಡಿಸಿದರು. 
 
ಈ ನಿರ್ಣಯ ಮಂಡನೆಯಲ್ಲಿ ದೇಶದ ಅಖಂಡತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಕೈಗೊಂಡ ನಡೆಗಳನ್ನು ಶ್ಲಾಘಿಸಲಾಯಿತು.
 
ವಿರೋಧ ಪಕ್ಷ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ  ಈ ನಿರ್ಣಯಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ಆದರೆ ಇಲ್ಲಿ ಕೂಡ ಆಪ್ ಮತ್ತು ಬಿಜೆಪಿ ನಡುವಿನ ಕಹಿ ಸಂಬಂಧದ ಝಲಕ್ ಕೂಡ ಕಂಡು ಬಂತು. 
 
ಮೂಲ ನಿರ್ಣಯ ಮಂಡನೆಯಲ್ಲಿ ಯಾವ ವ್ಯಕ್ತಿಯ ಹೆಸರು ಕೂಡ ಇರಲಿಲ್ಲ. ಆದರೆ ಗುಪ್ತಾ ಹೇಳಿದ ಬಳಿಕ ಇದರಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವರ ಹೆಸರನ್ನು ಸೇರಿಸಲಾಯಿತು.   
 
ಕೇಜ್ರಿವಾಲ್ ಮಂಡಿಸಿದ ನಿರ್ಣಯ ಸರ್ವಾನುಮತದಿಂದ ಪಾಸ್ ಆಯಿತು. ವಿಧಾನಸಭೆಯಲ್ಲಿ ಉಗ್ರ ದಾಳಿಯನ್ನು ಖಂಡಿಸಲಾಯಿತು ಮತ್ತು ಭವಿಷ್ಯದಲ್ಲಿ ಉರಿಯಲ್ಲಿ ಎಸಗಿದಂತ ಮಹಾತಪ್ಪನ್ನು ಪುನರಾವರ್ತಿಸಬೇಡಿ ಎಂದು ಪಾಕ್‌ಗೆ ಎಚ್ಚರಿಕೆಯನ್ನು ಸಹ ನೀಡಲಾಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಇಲಾಖೆ ನೋಡಿದ್ರೂ ಕಮಿಷನ್ ಕಮಿಷನ್ ಕಮಿಷನ್: ಬಿವೈ ವಿಜಯೇಂದ್ರ

ಭಷ್ಟಚಾರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಜಮೀರ್ ಅಹ್ಮದ್‌

Viral video: ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆಯ ನಡು ರಸ್ತೆಯಲ್ಲೇ ಎಳೆದಾಡಿದ ಯುವಕರು

‌ತಿರುಮಲ ವೆಂಕಟೇಶ್ವರ ದೇವರ ಭಕ್ತರಿಗೆ ಗುಡ್‌ನ್ಯೂಸ್‌: ಲಡ್ಡುಗಾಗಿ ಇನ್ನೂ ಗಂಟೆಗಟ್ಟಲೆ ಕಾಯಬೇಕಿಲ್ಲ

ಅಮೀರ್ ಖಾನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ ಸಂವೇದನಾಶೀಲ ನಟ ಎಂದಿದ್ದೇ ತಪ್ಪಾಯ್ತು

ಮುಂದಿನ ಸುದ್ದಿ
Show comments