Select Your Language

Notifications

webdunia
webdunia
webdunia
webdunia

ದೆಹಲಿ: ಇಂದು ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಲಿರುವ ಕೇಜ್ರಿವಾಲ್

ದೆಹಲಿ: ಇಂದು ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಲಿರುವ ಕೇಜ್ರಿವಾಲ್
ನವದೆಹಲಿ , ಗುರುವಾರ, 31 ಜುಲೈ 2014 (12:43 IST)
ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲವನ್ನು ಬಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಇಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಆಟೋ ಚಾಲಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. 

ಇದನ್ನೇ ಹೋಲುವ  ಸಮಾವೇಶವನ್ನು  ಕಳೆದ ತಿಂಗಳು ಸಹ  ನಡೆಸಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ, ತಮ್ಮದೇ ತಪ್ಪಿನಿಂದ   ಕಳೆದುಕೊಂಡಿರುವ ಜನರ ವಿಶ್ವಾಸವನ್ನು ಮರಳಿ ಪಡೆಯುವಲ್ಲಿ ವ್ಯಸ್ತರಾಗಿದ್ದಾರೆ. 
 
ಕಳೆದ ವರುಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ  ಆಟೋ ಚಾಲಕರಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಆಪ್ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ರಿಕ್ಷಾ ನೌಕರರು ತಮ್ಮ ವಾಹನಗಳ ಮೇಲೆ ಆಪ್ ಪೋಸ್ಟರ್‌ಗಳನ್ನು ಅಂಟಿಸಿಕೊಂಡು ಪ್ರಚಾರ ನೀಡಿದ್ದರು. 
 
ಒಂದು ವೇಳೆ ದೆಹಲಿಯಲ್ಲಿ ಮರುಚುನಾವಣೆ ಘೋಷಣೆಯಾದರೆ, ತಮ್ಮ ಗೆಲುವಿನಲ್ಲಿ ಆಟೋ ಚಾಲಕರ ಪಾತ್ರ ಬಹಳ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂಬುದನ್ನು ನಂಬಿರುವ ಕೇಜ್ರಿವಾಲ್  ಅವರ ವಿಶ್ವಾಸವನ್ನು ಪುನಃ ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. 
 
ಇಂದಿನ ಸಮಾವೇಶವನ್ನು ಹೊರತು ಪಡಿಸಿ, ದೆಹಲಿಯಲ್ಲಿ ಜಾರಿಯಲ್ಲಿರುವ ರಾಷ್ಟ್ರಪತಿ ಆಡಳಿತ ಮತ್ತು ವಿಧಾನಸಭೆಯ ವಿಸರ್ಜನೆ ಮಾಡದೇ ಇರುವುದನ್ನು ವಿರೋಧಿಸಿ ಬರುವ ಭಾನುವಾರ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯನ್ನವರು ಆಯೋಜಿಸಿದ್ದಾರೆ. 

Share this Story:

Follow Webdunia kannada