Webdunia - Bharat's app for daily news and videos

Install App

ಕಾಶ್ಮೀರದಲ್ಲಿ ಕಲ್ಲು ತೂರಾಟ ಸಮರ್ಥನೆ, ಕ್ಷುಲ್ಲಕ ರಾಜಕೀಯ: ಅರುಣ್ ಜೇಟ್ಲಿ

Webdunia
ಸೋಮವಾರ, 22 ಆಗಸ್ಟ್ 2016 (17:06 IST)
ಕಾಶ್ಮೀರದಲ್ಲಿ ಕಲ್ಲು ತೂರಾಟವಾಗುತ್ತಿರುವುದನ್ನು ಸಮರ್ಥಿಕೊಳ್ಳುವವರು ಕ್ಷುಲ್ಲಕ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. 
 
ಜನಸಂಘದ ಸ್ಥಾಪಕ, ಬಿಜೆಪಿ ಹರಿಕಾರ ಪ್ರೇಮನಾಥ್ ದೋಗ್ರಾ ಅವರ ಸ್ಮರಣಾರ್ಥ ಸಂಬಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನ್ನಾಡುತ್ತಿದ್ದ ಅವರು, ಕಾಶ್ಮೀರದಲ್ಲಿ ದಂಗೆ ಮತ್ತು ಕಲ್ಲು ತೂರಾಟವನ್ನು ಸಮರ್ಥಿಸಿಕೊಳ್ಳುವವರು ಕ್ಷುಲ್ಲಕ ರಾಜಕೀಯದ ಹೊರತಾಗಿ ತಮ್ಮ ತಲೆಯಲ್ಲಿ ಮತ್ತೇನನ್ನೂ ಹೊಂದಿಲ್ಲ ಎಂದು ಗುಡುಗಿದ್ದಾರೆ. 
 
ಕೆಲವರು ಹೊರಗಡೆ ನಿಂತುಕೊಂಡು ಕಾಶ್ಮೀರದಲ್ಲಿ ಮಾನವ ಹಕ್ಕಿನ ಬಗ್ಗೆ ಮಾತನ್ನಾಡುತ್ತಾರೆ. ಅವರೆಂದಾದರೂ ಕಣಿವೆನಾಡಿಗೆ ಭೇಟಿ ಕೊಟ್ಟು ಕರ್ತವ್ಯವನ್ನು ನಿರ್ವಹಿಸುವಾಗ ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ನೋಡಿದ್ದಾರಾ? ಎಂದು ಅವರು ಪ್ರಶ್ನಿಸಿದ್ದಾರೆ. 
 
1947ರಲ್ಲಿ ಭಾರತ ಸ್ವಾತಂತ್ರವಾದಾಗ ಅದು ರಚನೆಯಾಗಿದ್ದು ಕೇವಲ ಶಾಂತಿ ಮತ್ತು ಅಭಿವೃದ್ಧಿಗಾಗಿ, ಆದರೆ ಪಾಕಿಸ್ತಾನ ಹುಟ್ಟಿದ್ದು ಕೇವಲ ಭಾರತವನ್ನು ಒಡೆಯಲು ಎಂದು ಜೇಟ್ಲಿ ಹೇಳಿದ್ದಾರೆ.
 
ಮೂರು ಯುದ್ಧಗಳಲ್ಲಿ ಭಾರತದ ಕೈಯ್ಯಿಂದ ಹೀನಾಯ ಸೋಲು ಕಂಡ ಪಾಕಿಸ್ತಾನ 1990ರಲ್ಲಿ ನಮ್ಮ ವಿರುದ್ಧ ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿತು. 2008-1010ರಲ್ಲಿ ಅವರು ತಮ್ಮ ಪ್ರಾಕ್ಸಿ ಕದನಕ್ಕೆ ಕಲ್ಲು ತೂರಾಟದ ಹೊಸ ಮುಖವನ್ನು ಪರಿಚಯಿಸಿದರು. ಮತ್ತೀಗ ಆಗುತ್ತಿರುವುದು ಸಹ ಅದೇ. ಉಗ್ರವಾದ ಮತ್ತು ಕಲ್ಲು ತೂರಾಟವನ್ನು ದೃಢವಾಗಿ ವ್ಯವಹರಿಸಬೇಕು. ಇಂತಹ ಸನ್ನಿವೇಶಗಳನ್ನು ನಿಭಾಯಿಸುವಾಗ ಯಾವುದೇ ಶಿಥಿಲತೆಯನ್ನು ತೋರಬಾರದು ಎಂದಿದ್ದಾರೆ ಜೇಟ್ಲಿ. 
 
ಪ್ರಧಾನಿ ಕಚೇರಿಯ ಸಹಾಯಕ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಹ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಏರ್‌ಸ್ಟ್ರೈಕ್‌ಗೆ ಕ್ಯಾರೇ ಎನ್ನದ ಇರಾನ್‌: ಇಸ್ರೇಲ್‌ ಮೇಲೆ ಮಿಸೈಲ್‌ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ

ಮುಂದಿನ ಸುದ್ದಿ
Show comments