Webdunia - Bharat's app for daily news and videos

Install App

ಅಪ್ಪ ಬಚ್ಚಿಟ್ಟಿದ್ದ 50ಸಾವಿರ ಮೊತ್ತದ ಹಳೆ ನೋಟು; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

Webdunia
ಶನಿವಾರ, 21 ಜನವರಿ 2017 (12:27 IST)
ಸಾಯುವ ಮುನ್ನ ತನ್ನ ತಂದೆ ಬಚ್ಚಿಟ್ಟಿದ್ದ 50,000 ರೂಪಾಯಿ ಮೊತ್ತದ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್‌ಬಿಐ ಕಚೇರಿಗೆ ಹೋಗಿದ್ದ ವ್ಯಕ್ತಿಯೊಬ್ಬನಿಗೆ ನಿರಾಸೆಯಾಗಿದೆ. ನೋಟುಗಳನ್ನು ಬದಲಾಯಿಸಿ ಕೊಡಲು ಆರ್‌ಬಿಐ ನಿರಾಕರಿಸಿದೆ. 

 
ಮಧ್ಯಪ್ರದೇಶದ ಭೂಪಾಲ್‌ ನಿವಾಸಿ ಮಸ್ತಾನ್ ಸಿಂಗ್ ಎದುರಿಸುತ್ತಿರುವ ದುರದೃಷ್ಟಕರ ಕಥೆ ಇದು. ಮಸ್ತಾನ್ ತಂದೆ 93 ವರ್ಷದ ಶಿವಚರಣ್ ಸಿಂಗ್ ಡಿಸೆಂಬರ್ 26 ರಂದು ವಯೋಸಹಜ ಕಾಯಿಲೆಗೊಳಗಾಗಿ ಸಾವನ್ನಪ್ಪಿದ್ದರು. ಸಾವಿನೋತ್ತರದ ಎಲ್ಲ ವಿಧಿವಿಧಾನಗಳನ್ನು ಪೂರೈಸಿ ತಿಥಿ ಮಾಡಲೆಂದು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವರ ಕೋಣೆಯ ಕಪಾಟಿನಲ್ಲಿ 50 ಸಾವಿರ ಮೌಲ್ಯದ 500 ರೂ ಮುಖಬೆಲೆಯ ನೋಟುಗಳು ಸಿಕ್ಕಿವೆ. ಸಾಯುವ ಸಂದರ್ಭದಲ್ಲಿ ಶಿವಚರಣ್ ಸಿಂಗ್ ಜ್ಞಾಪಕ ಶಕ್ತಿಯನ್ನು ಸಹ ಕಳೆದುಕೊಂಡಿದ್ದರು. ಹೀಗಾಗಿ ಈ ಹಣದ ಕುರಿತು ಅವರು ಮನೆಯ ಸದಸ್ಯರಿಗೆ ತಿಳಿಸಿರಲಿಲ್ಲ. 
 
ಮತ್ತೀಗ ಈ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಮಸ್ತಾನ್ ಆರ್‌ಬಿಐ ಕಚೇರಿಗೆ ತೆರಳಿದ್ದಾನೆ. ಆದರೆ ನಿಯಮಾವಳಿಗಳ ಪ್ರಕಾರ ಹಳೆ ನೋಟು ಸ್ವೀಕರಿಸುವ ಗಡುವು ಮುಗಿದಿದೆ. ಮತ್ತೀಗ ಆನಿವಾಸಿ ಭಾರತೀಯರು ಮಾತ್ರ ಹಣವನ್ನು ಬದಲಾಯಿಸಿಕೊಳ್ಳಬಹುದು, ಎಂದು ಆತನನ್ನು ವಾಪಸ್ ಕಳುಹಿಸಲಾಗಿದೆ. 
 
ತಂದೆಯ ಮರಣ ಪತ್ರ ಮತ್ತು ಆಸ್ಪತ್ರೆಯ ದಾಖಲೆಗಳನ್ನು ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಸ್ತಾನ್ ಅಳಲು ತೋಡಿಕೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ದಾರಿ ಕಾಣದಂತಾಗಿದ್ದು ಹೇಗೆ ಈ ನೋಟುಗಳನ್ನು ಬದಲಾಯಿಸಿಕೊಳ್ಳಲಿ ಎಂಬ ಯೋಚನೆಗೆ ಬಿದ್ದಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments