ಪಾಕಿಸ್ತಾನದಲ್ಲಿ ಅಡಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ, ಮುಂಬೈನಲ್ಲಿ ನಡೆಯಲಿರುವ ಅಳಿಯ ಅಲಿಶಾಹ್ ಪಾರ್ಕರ್ ವಿವಾಹ ಕಾರ್ಯಕ್ರಮವನ್ನು ಸ್ಕೈಪೇ ಮೂಲಕ ವೀಕ್ಷಿಸಲಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ದಾವೂದ್ ಸಹೋದರಿ ಹಸೀನಾ ಪಾರ್ಕರ್ ಕಿರಿಯ ಪುತ್ರನಾದ ಅಲಿಶಾಹ್ ಪಾರ್ಕರ್, ದಕ್ಷಿಣ ಮುಂಬೈನಲ್ಲಿರುವ ರಸೂಲ್ ಮಸೀದಿಯಲ್ಲಿ ಬುಧವಾರದಂದು ಮೆಮೋನ್ ಸಮುದಾಯದ ಆಯೇಶಾ ನಗಾನಿಯನ್ನು ವಿವಾಹವಾಗುತ್ತಿದ್ದಾರೆ. ಅಂದು ಸಂಜೆ ಜುಹುನಲ್ಲಿರುವ ತುಲಿಪ್ ಸ್ಟಾರ್ ಹೋಟೆಲ್ನಲ್ಲಿ ಔತಣಕೂಟ ಆಯೋಜಿಸಲಾಗಿದೆ ಎನ್ನಲಾಗಿದೆ.
ಗಮನಾರ್ಹ ವಿಷಯವೆಂದರೆ, ಅಲಿಶಾಹ್ ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದು ಹಸೀನಾರ ಏಕೈಕ ಬದುಕುಳಿದ ಪುತ್ರನಾಗಿದ್ದಾನೆ.
ಏತನ್ಮಧ್ಯೆ, ಮುಂಬೈನ ಅಪರಾಧ ದಳದ ಅಧಿಕಾರಿಗಳು ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
1993ರ ಮುಂಬೈ ಸರಣಿ ಸ್ಫೋಟದ ರೂವಾರಿಯಾದ ದಾವೂದ್ ಇಬ್ರಾಹಿಂ ನಂತರ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ದಾವೂದ್ನನ್ನು ಭಾರತಕ್ಕೆ ಒಪ್ಪಿಸುವಂತೆ ಹಲವು ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಲಾಗಿದೆ. ಆದಾಗ್ಯೂ ಪಾಕ್ ಮಾತ್ರ ದಾವೂದ್ ನಮ್ಮ ದೇಶದಲ್ಲಿಲ್ಲ ಎಂದು ಮೊಂಡ ವಾದ ಮಂಡಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ