Webdunia - Bharat's app for daily news and videos

Install App

ಬ್ರಹ್ಮಪುತ್ರಾ ಅಬ್ಬರಕ್ಕೆ ಕೊಚ್ಚಿಹೋಯ್ತು ಅಸ್ಸಾಂ

Webdunia
ಸೋಮವಾರ, 14 ಆಗಸ್ಟ್ 2017 (16:12 IST)
ಅಸ್ಸಾಂ ಮತ್ತು ಬಿಹಾರ ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಇದುವರೆಗೂ 100ಕ್ಕೂ ಅಧಿಕ ಮಂದಿ ಅಸುನೀಗಿದ್ಧಾರೆ.

ಅಸ್ಸಾಂನ 21 ಜಿಲ್ಲೆಗಳು ನೆರೆಪೀಡಿತವಾಗಿದ್ದು, ಶೇ.60ರಷ್ಟು ಅಸ್ಸಾಂ ರಾಜ್ಯ ತತ್ತರಿಸಿಹೋಗಿದೆ. ಅಪಾಯದಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರಾ ನದಿ ಮುಕ್ಕಾಲು ಭಾಗ ಻ಸ್ಸಾಂ ರಾಜ್ಯವನ್ನ ಮುಳುಗಿಸಿದೆ. ಕೊಖ್ರಾಜಾರ್, ಬರ್ಪೇಟಾ, ಲಖಿಮ್ ಪುರ್, ದುಬ್ರಿ, ದಿಬ್ರೂಘರ್ ಪ್ರದೇಶಗಳು ತೀವ್ರ ಅಪಾಯದಲ್ಲಿವೆ. ಸಬನ್ ಸಿರಿ, ಧಾನ್ ಸಿರಿ, ಬೆಕಿ, ಬುರ್ಹಿದೆಹಿಂಗ್, ಸಂಕೋಶ್, ಪುತಿಮಾರಿ ಜಿಲ್ಲೆಗಳಲ್ಲೂ ಪ್ರವಾಹ ಉಂಟಾಗಿದೆ. 22 ಲಕ್ಷ ಜನರ ಜೀವನದ ಮೇಲೆ ಪ್ರವಾಹ ಪರಿಣಾಮ ಬೀರಿದ್ದು, ಎಲ್ಲಿ ನೋಡಿದರೂ ನೀರೋ ನೀರು.

ರಾಷ್ಟ್ರೀಯ ವಿಪತ್ತು ರಕ್ಷಣಾ ದಳ ಮತ್ತು ರಾಜ್ಯ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರ ತೊಡಗಿಕೊಂಡಿವೆ.ನಡುಗದ್ದೆಗಳಲ್ಲಿ ಸಿಲುಕಿಕೊಂಡಿರುವ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವಾಯುಸೇನೆ ಸಹ ನೆರವಿಗೆ ಧಾವಿಸಿದೆ. ಪ್ರವಾಹ ಕಾರ್ಯಾಚರಣೆಗೆ ಎಲ್ಲ ನೆರವು ಒದಗಿಸುವುದಾಗಿ ಪ್ರದಾನಮಮತ್ರಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments