Webdunia - Bharat's app for daily news and videos

Install App

ಹೆಲ್ಮೆಟ್ ಧರಿಸಿ ಮದುವೆಮನೆಗೆ ಹೊರಟ ದಲಿತ ಮದುಮಗ

Webdunia
ಬುಧವಾರ, 13 ಮೇ 2015 (17:45 IST)
ಮದುವೆಯ ದಿನ ತಮ್ಮ ಕಡೆಯ ದಿಬ್ಬಣದೊಂದಿಗೆ ಮದುಮಗ ಕುದುರೆ ಏರಿ ಬರುವುದು ಉತ್ತರ ಭಾರತದಲ್ಲಿ ಸಾಮಾನ್ಯ. ಅದರಂತೆ ಮಧ್ಯಪ್ರದೇಶದ ನೆಗ್ರೂನ್‌ ಗ್ರಾಮದ ಆ ಯುವಕ ಕುದುರೆಯನ್ನೇರಿ ಕಲ್ಯಾಣ ಮಂಟಪದತ್ತ ಸಾಗಿದ್ದ. ಆದರೆ ವಿಚಿತ್ರವಾದ ಸಂಗತಿ ಎಂದರೆ ಆತ ಹೆಲ್ಮೆಟ್ ಕೂಡ ಧರಿಸಿದ್ದ. ಈತ ಹೀಗೆ ಮಾಡಲು ಕಾರಣ  ಮೇಲ್ವರ್ಗದ ಜನರ ಹಲ್ಲೆಯ ಭೀತಿ. 

ಇದು  ನಡೆದಿದ್ದು ಮಧ್ಯಪ್ರದೇಶದಲ್ಲಿ. ದಲಿತ ಸಮುದಾಯದ ಮದುಮಗನೊಬ್ಬ ಕುದುರೆ ಏರಿ ಮದುವೆಯಾಗಲು ಹೊರಟುದುದನ್ನು ಕಂಡು ಸಹಿಸದಾದ ಮೇಲ್ಜಾತಿಯ ಜನರು, ಆತನ ಮತ್ತು ದಿಬ್ಬಣದ ಮೇಲೆ ಸಹ ಕಲ್ಲೆಸೆದು ಅಮಾನುಷ, ನಿರ್ಲಜ್ಜ ವರ್ತನೆಯನ್ನು ತೋರಿದ್ದಾರೆ. ಅಲ್ಲದೇ ಆತ ಸವಾರಿ ಹೊರಟಿದ್ದ ಕುದುರೆಯನ್ನು ಸಹ ಎಳೆದೊಯ್ದಿದ್ದಾರೆ.
 
ಮೇ 10 ರ ರಾತ್ರಿ ನಡೆದ ಈ ಘಟನೆಯಲ್ಲಿ ಹೆಚ್ಚುವರಿ ತಹಶೀಲ್ದಾರ್‌ ಕೆ ಎಲ್‌ ಜೈನ್‌ ಸೇರಿದಂತೆ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ತಾಲ್ ಪೊಲೀಸ್ ಠಾಣಾಧಿಕಾರಿ ಸುರೇಶ್ ಬಾಲರಾಜ್ ತಿಳಿಸಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ 72 ಜನರ ಮೇಲೆ ದೂರು ದಾಖಲಾಗಿದೆ. 
 
ಮೇಲ್ವರ್ಗದ ಜನರ ಹಲ್ಲೆಯ ಅನುಮಾನ ಮೊದಲೇ ಇದ್ದುದರಿಂದ ವಧುವಿನ ತಂದೆ  ಮೊದಲೇ ಪೊಲೀಸರು ಸಹಾಯವನ್ನು ಕೋರಿದ್ದ . ಆದರು ಕೂಡ ದಿಬ್ಬಣದ ಮೇಲೆ ಹಲ್ಲೆ ನಡೆದಿದೆ. 
 
ಕುದುರೆಯನ್ನು ಸಹ ಎಳೆದೊಯ್ದಿದ್ದರಿಂದ ಮತ್ತೊಂದು ಕುದುರೆಯನ್ನು ತರಸಲಾಯಿತು. ದುರುಳ ಜನರು ಮತ್ತೆ ದಾಳಿಯನ್ನು  ಮುಂದುವರೆಸಿದರು. ಹೀಗಾಗಿ ಪೊಲೀಸರು ಮದುಮಗನಿಗೆ ಹೆಲ್ಮೆಟ್‌ನ್ನು ತಂದುಕೊಟ್ಟು ಸವಾರಿಯನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ತಮಿಳುನಾಡು ಗವರ್ನರ್ ರವಿ ವಯಸ್ಸು 70 ದಾಟಿದ್ರೂ ಏನು ಎನರ್ಜಿ

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

Show comments