ಸ್ವಾತಂತ್ರ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ 149 ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಗೌರವ ವಂದನೆ ಸಲ್ಲಿಸಿದ್ದು, ಲಾಲಾ ಭಾರತದ ಹೆಮ್ಮೆಯ ಪುತ್ರ ಎಂದು ಕೊಂಡಾಡಿದ್ದಾರೆ.
ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರದು ಆ ಕಾಲಮಾನದಲ್ಲಿನ ಅತ್ಯಂತ ವಿಶಿಷ್ಠ ವ್ಯಕ್ತಿತ್ವ. ಅವರ ಜನ್ಮದಿನದಂದು ನಾನವರಿಗೆ ವಂದನೆ ಸಲ್ಲಿಸುತ್ತೇನೆ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
1865ರ ಈ ದಿನದಂದು ಜನಿಸಿದ್ದ ಲಾಲಾ ಲಜಪತ್ ರಾಯ್ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ಪಂಜಾಬ್ ಕೇಸರಿ( ಸಿಂಹ) ಎಂದು ಕರೆಯಲಾಗುತ್ತದೆ.
ಅವರು ಅಕ್ಟೋಬರ್ 30, 1928ರಲ್ಲಿ ವಿಧಿವಶರಾಗಿದ್ದರು.