Select Your Language

Notifications

webdunia
webdunia
webdunia
webdunia

ಗ್ಯಾಸ್ ಸಿಲಿಂಡರ್ ಸ್ಪೋಟ: ದಂಪತಿ ದುರ್ಮರಣ

ಗ್ಯಾಸ್ ಸಿಲಿಂಡರ್ ಸ್ಪೋಟ: ದಂಪತಿ ದುರ್ಮರಣ
ರಾಯಚೂರು , ಮಂಗಳವಾರ, 9 ಫೆಬ್ರವರಿ 2016 (08:26 IST)
ಗ್ಯಾಸ್ ಸಿಲಿಂಡರ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಂಪತಿ ದುರ್ಮರಣವನ್ನಪ್ಪಿರುವ ದುರ್ಘಟನೆ ರಾಯಚೂರಿನ ವಾಸವಿನಗರದಲ್ಲಿ ನಡೆದಿದೆ. 

ವಕೀಲರಾಗಿದ್ದ ನಾಗಭೂಷಣ (45) ಇಂದಿರಮ್ಮ (35 ) ಎಂಬುವರು ಮೃತ ಪತಿ-ಪತ್ನಿಯರಾಗಿದ್ದು, ನಸುಕಿನ ಜಾವ 4 ಗಂಟೆ ಸುಮಾರಿಗೆ ಟೀ ಮಾಡಲೆಂದು ಗ್ಯಾಸ್ ಒಲೆ ಹಚ್ಚಿದಾಗ ಸಿಲಿಂಡರ್ ಸ್ಪೋಟಗೊಂಡಿದೆ. ಮೊದಲೇ ಅನಿಲ ಸೋರಿಕೆಯಾಗಿದ್ದರಿಂದ ಬೆಂಕಿ ಹೊತ್ತಿಕೊಂಡು ಇಬ್ಬರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.  ಸಮಯದಲ್ಲಿ ದಂಪತಿಗಳ ಪುತ್ರ ಮನೆಯಲ್ಲಿ ಇಲ್ಲದಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಕೇವಲ ಅಡುಗೆ ಕೋಣೆ ಮಾತ್ರ ಧ್ವಂಸವಾಗಿದ್ದು, ನೆರೆಹೊರೆಯ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ 
 
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ನೇತಾಜಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸೋರಿಕೆಗೆ ಕಾರಣವೇನೆಂದು ತನಿಖೆಯ ಬಳಿಕವೇ ತಿಳಿದು ಬರಲಿದೆ.
 
ಧಾರವಾಡದ ಯೋಧ ಜೀವಂತವಾಗಿ ಪತ್ತೆಯಾಗಿದ್ದಾರೆ ಅಧಿಕೃತ ಪ್ರಕಟನೆ ಹೊರಡಿಸಿದೆ

Share this Story:

Follow Webdunia kannada