Webdunia - Bharat's app for daily news and videos

Install App

ಗೋಮೂತ್ರದಿಂದ ಕ್ಯಾನ್ಸರ್‌ ಶಮನ: ಬಿಜೆಪಿ ಸದಸ್ಯ

Webdunia
ಶನಿವಾರ, 21 ಮಾರ್ಚ್ 2015 (16:54 IST)
ಗೋಮೂತ್ರ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಶಮನಗೊಳಿಸುವಲ್ಲಿ ಪರಿಣಾಮಕಾರಿ ಔಷಧ ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಸದಸ್ಯ ಶಂಕರಭಾಯಿ ಎನ್ ಗೋಹತ್ಯೆಯನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. 

ರಾಜ್ಯಸಭೆಯಲ್ಲಿ ನಡೆದ ಚರ್ಚೆಯೊಂದರಲ್ಲಿ ಮಾತನಾಡುತ್ತಿದ್ದ ಶಂಕರಭಾಯಿ ನಿಮ್ಮನ್ನು ನೀವು ಕ್ಯಾನ್ಸರ್‌ನಿಂದ ಕಾಪಾಡಿಕೊಳ್ಳಲು ಬಯಸುತ್ತೀರಾ ಎಂದಾದರೆ ಆದ್ಯತೆಯ ಮೇರೆಗೆ ಗೋವನ್ನು ರಕ್ಷಿಸಬೇಕು. ಆಕಳ ಮೂತ್ರ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲದು. ನಾನಿದಕ್ಕೆ ಸಾಕ್ಷ್ಯ ತೋರಿಸಬಲ್ಲೆ.  ಆದರೆ ಯಾರು ಕೂಡ ಇದನ್ನು ಕೇಳ ಬಯಸುವುದಿಲ್ಲ ಎಂದಿದ್ದಾರೆ.
 
ಆಕಳ ಸಗಣಿ ಮತ್ತು ಮೂತ್ರದಿಂದ ನಮಗೆ ಅನೇಕ ಉಪಯೋಗಗಳಿವೆ. ಇವುಗಳನ್ನು  ಕ್ಯಾನ್ಸರ್ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ. 
 
"ಗೋಹತ್ಯೆ ಮಹಾಪಾಪ ಎಂದ ಅವರು ಗೋವು ತಾಯಿ ಸಮಾನ ಎಂದು ವೇದಗಳಲ್ಲಿ ಹೇಳಲಾಗಿದೆ. ಕೆಲವರು ಆಹಾರದ ಉದ್ದೇಶದಿಂದ ಆಕಳನ್ನು ಕೊಲ್ಲ ಬಯಸುತ್ತಾರೆ. ಆಕಳನ್ನು ರಕ್ಷಿಸದಿದ್ದರೆ ದೇಶವನ್ನು ಕಾಪಾಡಲು ಸಾಧ್ಯವಿಲ್ಲ", ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments