Webdunia - Bharat's app for daily news and videos

Install App

`ನಿನ್ನ ದಾಖಲೆಗಳು ನಕಲಿ ಎಂದು ಸಾಬೀತಾದರೆ ಜೈಲಿಗೆ ಹಾಕುತ್ತೇವೆ’

Webdunia
ಶನಿವಾರ, 18 ಮಾರ್ಚ್ 2017 (12:40 IST)
ನಾನು ಜಯಲಲಿತಾ ಮತ್ತು ಶೋಭನ್ ಬಾಬು ಪುತ್ರ. ಅಮ್ಮನನ್ನ ಕೊಲೆ ಮಾಡಲಾಗಿದೆ.. ಅಮ್ಮನ ಆಸ್ತಿ ನನಗೇ ಸೇರಬೇಕೆಂದು ಹೇಳಿಕೊಂಡಿದ್ದ 32 ವರ್ಷದ ಕೃಷ್ಣಮೂರ್ತಿ ಎಂಬುವವನಿಗೆ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದೆ. ಚೆನ್ನೈ ಪೊಲೀಸ್ ಕಮೀಷನರ್ ಎದುರು ತನಿಖೆಗೆ ಹಾಜರಾಗುವಂತೆ ಹೇಳಿರುವ ಕೋರ್ಟ್, ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಸಾಬೀತಾದರೆ ನಿನ್ನನ್ನ ಜೈಲಿಗಟ್ಟುವುದಾಗಿ ಹೇಳಿದೆ.
 

ನಾನು ದಿವಂಗತ ಜಯಲಲಿತಾ ಮತ್ತು ಶೋಭನ್ ಬಾಬು ಪುತ್ರ. 1986ರಲ್ಲಿ ಈರೋಡ್`ನಲ್ಲಿ ಶೂಟಿಂಗ್ ವೇಳೆ ಜಯಲಲಿತಾ ಅವರನ್ನ ಭೇಟಿಯಾದ ವಸಂತಮಣಿ ಎಂಬುವವರಿಗೆ ನನ್ನನ್ನ ಒಪ್ಪಿಸಲಾಗಿತ್ತು ಎಂದು ಕೋರ್ಟ್ ಮುಂದೆ ಹೇಳಿರುವ ಕೃಷ್ಣಮೂರ್ತಿ, ಎಂಜಿಆರ್ ಸಹಿ ಮಾಡಿದ್ದಾರೆನ್ನಲಾದ ದತ್ತು ಸ್ವೀಕಾರ ಪತ್ರವನ್ನೂ ಕೋರ್ಟ್`ಗೆ ನೀಡಿದ್ದಾನೆ.


ದಾಖಲೆಗಳನ್ನ ಪರಿಶೀಲಿಸಿದ ಜಸ್ಟೀಸ್ ಆರ್. ಮಹದೇವನ್, ಒಬ್ಬ ಎಲ್`ಕೆಜಿ ಹುಡುಗನೂ ಈ ದಾಖಲೆಗಳನ್ನ ನಕಲಿ ಎಂದು ಹೇಳಬಲ್ಲ. ನೀನು ನೀಡಿರುವ ಫೋಟೋ ಸಾರ್ವಜನಿಕವಾಗಿ ಸಿಗುತ್ತದೆ. ಯಾರು ಬೇಕಾದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದುಕೊಂಡಿದ್ದೀಯಾ.. ಕೋರ್ಟ್ ಜೊತೆ ಆಟವಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹೆಚ್ಚುವರಿ ಸರ್ಕಾರಿ ವಕೀಲರಿಗೆ ದಾಖಲೆಗಳ ಅಸಲಿತನದ ಬಗ್ಗೆ ಪರಿಶೀಲನೆ ನಡೆಸುವಂತೆ ಆದೇಶಿಸಿದೆ.

ಸೆಪ್ಟೆಂಬರ್`ನಲ್ಲಿ ನಾನು ಜಯಲಲಿತಾರನ್ನ ಅವರ ನಿವಾಸದಲ್ಲೇ ಭೇಟಿಯಾಗಿದ್ದೆ. ನನ್ನನ್ನ ಮಗನೆಂದು ಜಗತ್ತಿಗೆ ತಿಳಿಸಲು ಅಮ್ಮ ನಿರ್ಧರಿಸಿದ್ದರು. ಆದರೆ, ಶಶಿಕಲಾ ಇದನ್ನ ವಿರೋಧಿಸಿದ್ದರು. ಬಳಿಕ ಮಾತಿನ ಚಕಮಕಿ ನಡೆದು ಅಮ್ಮನನ್ನ ಮಹಡಿಯಿಂದ ಕೆಳಗೆ ತಳ್ಳಿದ್ದರು ಎಂದು ಕೃಷ್ಣಮೂರ್ತಿ ಹೇಳಿಕೊಂಡಿದ್ದರು.

ಕೃಷ್ಣಮೂರ್ತಿ ಪರವಾಗಿ ಪಿಐಎಲ್ ಸಲ್ಲಿಸಿದ್ದ ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ, ಸತ್ಯ ಹೊರಬರಬೇಕು, ಕೃಷ್ಣಮೂರ್ತಿ ದಾಖಲೆಗಳು ಸುಳ್ಳೆಂದು ಸಾಬೀತಾದರೆ ಕೋರ್ಟ್ ಅವನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನನ್ನಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕೋರ್ಟ್`ಗೆ ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಎರಡು ದಿನಗಳಿಗೆ ಹವಾಮಾನದಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಮುಂದಿನ ಸುದ್ದಿ
Show comments