Webdunia - Bharat's app for daily news and videos

Install App

ಲೋಕಸಭೆಯಲ್ಲಿ ವಿರೋಧ ಪಕ್ಷ ಇಲ್ಲವಾಗತ್ತಾ?

Webdunia
ಶನಿವಾರ, 17 ಮೇ 2014 (12:34 IST)
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಥಮ ಬಾರಿಗೆ ವ್ಯಕ್ತಿ ಕೇಂದ್ರಿತ ಎನಿಸಿದ ಈ ಬಾರಿಯ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಪರಿಸ್ಥಿತಿಯನ್ನು ತಂದೊಡ್ಡಿದೆ. ಒಂದು ವೇಳೆ ಕಾಂಗ್ರೆಸ್ ಮೈತ್ರಿಕೂಟದಲ್ಲಿ ಯಾರಾದರೂ ಐದು ಜನ ಕೈಕೊಟ್ಟರೆ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಿಂದ ಕೂಡ ಹಿಂದೆ ಸರಿಯ ಬೇಕಾಗುತ್ತದೆ. ಆಗ ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗುತ್ತದೆ.  
 
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ನಿಚ್ಚಳ ಬಹುಮತ ಲಭಿಸಿದ್ದು, 543 ಲೋಕಸಭಾ ಸ್ಥಾನಗಳಲ್ಲಿ 285 ಸ್ಥಾನ ಗೆದ್ದಿರುವ ಬಿಜೆಪಿ ನಿರಾಯಾಸವಾಗಿ ಗದ್ದಿಗೆಯನ್ನು ಏರುತ್ತಿದೆ. ಎನ್‌ಡಿಎ ಮೈತ್ರಿಕೂಟಗಳು ಗೆದ್ದಿರುವ ಸ್ಥಾನ 337. ಬರೊಬ್ಬರಿ 60 ವರ್ಷ ಮತ್ತು 2004 ರಿಂದ ಸತತ 10 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಹಿಂದೆದೂ ಕಾಣದಂತಹ ಅವಮಾನಕರ ಸೋಲನ್ನು ಕಂಡಿದ್ದು  ಯುಪಿಎ ಮೈತ್ರಿಕೂಟ ಗೆದ್ದಿದ್ದು ಕೇವಲ 58 ಸ್ಥಾನಗಳನ್ನು. ಅದರಲ್ಲಿ ಕಾಂಗ್ರೆಸ್ ಪಾಲು ಕೇವಲ 43 ಮಾತ್ರ. ಹಾಗಾಗಿ ಯುಪಿಎ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. 
 
ದೇಶದಲ್ಲಿ ಒಟ್ಟು 543 ಲೋಕಸಭಾ ಸ್ಥಾನಗಳಿದ್ದು, ವಿರೋಧ ಪಕ್ಷ ಸ್ಥಾನ ಪಡೆಯಲು ಪ್ರತಿಶತ 10 ಅಂದರೆ 54ರಷ್ಟು ಬಲಾಬಲ ಇರಬೇಕು. ಅಂದರೆ ಮಾತ್ರ ವಿರೋಧ ಪಕ್ಷದ ನಾಯಕನ ಸ್ಥಾನ ಗಳಿಸಬಹುದು. ಕಾಂಗ್ರೆಸ್ ಗೆದ್ದಿರುವುದು ಕೇವಲ 43 ಸ್ಥಾನಗಳನ್ನು. ಹಾಗಾಗಿ ತಮ್ಮ ಮಿತ್ರರಲ್ಲಿ ಯಾರಾದರೂ 5 ಜನ ಕೈಕೊಟ್ಟರೆ 58 ಸಂಖ್ಯಾಬಲಗಳನ್ನು ಹೊಂದಿರುವ ಯುಪಿಎ ಸಂಕಷ್ಟಕ್ಕೆ ಸಿಲುಕಬಹುದು ಮತ್ತು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಿಂದ ಕೂಡ ದೂರವಿರಬೇಕಾಗುತ್ತದೆ. ಇದು ಕಾಂಗ್ರೆಸ್ ಪಾಲಿಗೆ ಅಳಿದುಳಿದ ಮರ್ಯಾದೆಯನ್ನು ಇಲ್ಲವಾಗಿಸುವ ಪರಿಸ್ಥಿತಿ ನಿರ್ಮಿಸಬಹುದು. ಅಲ್ಲದೆ ಸರಕಾರಕ್ಕೆ ಪ್ರಶ್ನಿಸಲು ವಿರೋಧ ಪಕ್ಷವೇ ಇಲ್ಲವಾಗಿಸಬಹುದು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾದಯಾತ್ರೆ ಆರಂಭಿಸಿದ ಬಳಿಕ, ಡಿಕೆ ಶಿವಕುಮಾರ್ ಉತ್ತರ ಕರ್ನಾಟಕದತ್ತ ಮುಖ: ವಿಜಯೇಂದ್ರ

ವಿಟ್ಲಪಿಂಡಿ ಉತ್ಸವದ ವೇಳೆ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ, ಭಕ್ತರಲ್ಲಿ ಆತಂಕ

ದೆಹಲಿ ಕಟ್ಟಡ ದುರಂತ, ಹಲವರು ಸಿಲುಕಿರುವ ಶಂಕೆ, ಇಬ್ಬರ ರಕ್ಷಣೆ

ಮಂಗಳೂರಿನಲ್ಲಿ 6ತಿಂಗಳ ಹಿಂದಿನ ಮಾಂಸ ಪತ್ತೆ ಬೆನ್ನಲ್ಲೇ ಕೆಎಫ್‌ಸಿಯ ಡೀಪ್ ಪ್ರೈಡ್ ಚಿಕನ್‌ನಲ್ಲಿ ಹುಳ, Video

ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕಲು ಪ್ರಧಾನಿ ಮೋದಿ ಯತ್ನಿ: ಮಲ್ಲಿಕಾರ್ಜುನ ಖರ್ಗೆ ಕಿಡಿ

Show comments