Select Your Language

Notifications

webdunia
webdunia
webdunia
webdunia

ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ

ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ
ನವದೆಹಲಿ , ಮಂಗಳವಾರ, 6 ಅಕ್ಟೋಬರ್ 2015 (15:54 IST)
ಗೋಮಾಂಸ ಭಕ್ಷಣೆ ಮಾಡಿದ್ದಕ್ಕಾಗಿ ನಡೆಯಿತೆನ್ನಲಾದ ದಾದ್ರಿ ಘಟನೆ ರಾಜಕೀಯ ಲೇಪವನ್ನು ಪಡೆದುಕೊಂಡಿರುವ ಮಧ್ಯೆ ಕಾಂಗ್ರೆಸ್, ಕೇಂದ್ರ ರಾಷ್ಟ್ರ ವ್ಯಾಪಿ ಗೋಹತ್ಯೆ ನಿಷೇಧವನ್ನು ಜಾರಿಗೆ ತಂದರೆ ತಾನು ಬೆಂಬಲಿಸುವುದಾಗಿ ಹೇಳಿ  ಅಚ್ಚರಿ ಮೂಡಿಸಿದೆ. 
 
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಗೋಹತ್ಯೆ ನಿಷೇಧದ ಕಾನೂನನ್ನು ಬೆಂಬಲಿಸಲು ಪರಿಶೀಲನೆ ನಡೆಸುವುದಾಗಿ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಸೋಮವಾರ ತಿಳಿಸಿದ್ದಾರೆ.
 
'ಮೂಲಗಳ ಪ್ರಕಾರ ತಮ್ಮ ಪಕ್ಷ ಹಿಂದೂ ವಿರೋಧಿಯಲ್ಲ', ಎಂದು ಬಿಂಬಿಸಲು  ದಿಗ್ವಿಜಯ್ ಈ ಹೇಳಿಕೆಯನ್ನು ನೀಡಿದ್ದಾರೆ. 
 
ದಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಲು ಸಿಂಗ್ ಸದ್ಯದಲ್ಲಿಯೇ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada