ಕೆಲ ದಿನಗಳ ಹಿಂದೆ ಕೇದಾರನಾಥ್ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ನೇಪಾಳ ಭೂಕಂಪಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಹಾರಾಜ್, ರಾಹುಲ್ ಗಾಂಧಿ ತಮ್ಮನ್ನು ತಾವು ಪವಿತ್ರಗೊಳಿಸದೇ ಪವಿತ್ರ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಭೂಕಂಪ ಸಂಭವಿಸಿದೆ ಎಂದಿದ್ದರು.
ಮತ್ತೊಬ್ಬ ವಿಎಚ್ಪಿ ನಾಯಕಿ, ಸಾದ್ವಿ ಪ್ರಾಚಿ ಮಾತನಾಡಿ, ರಾಹುಲ್ ಗಾಂಧಿ ಉತ್ತರಾಖಂಡ್ಗೆ ಭೇಟಿ ನೀಡಿದ್ದಾಗ ಜಯಪ್ರಳಯವಾಯಿತು. ಕೇದಾರನಾಥ್ಗೆ ಭೇಟಿ ನೀಡಿದಾಗ ಭೂಕಂಪವಾಗಿದೆ ಎಂದು ಲೇವಡಿ ಮಾಡಿದ್ದರು.
ಭೂಕಂಪದಿಂದ ಲಕ್ಷಾಂತರ ಜನತೆ ತೊಂದರೆ ಅನುಭವಿಸುತ್ತಿರುವಾಗ ಬಿಜೆಪಿ ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿರುವ ಬಗ್ಗೆ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಪ್ರದಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ತರಾಟೆಗೆ ತೆಗೆದುಕೊಂಡಿದೆ.