Select Your Language

Notifications

webdunia
webdunia
webdunia
webdunia

ಮಾಜಿ ರಾಷ್ಟ್ರಪತಿ ಕಲಾಂ ಅಂತ್ಯಸಂಸ್ಕಾರ ವಿಚಾರದಲ್ಲಿ ಗೊಂದಲ

ಮಾಜಿ ರಾಷ್ಟ್ರಪತಿ ಕಲಾಂ ಅಂತ್ಯಸಂಸ್ಕಾರ ವಿಚಾರದಲ್ಲಿ ಗೊಂದಲ
ನವದೆಹಲಿ , ಮಂಗಳವಾರ, 28 ಜುಲೈ 2015 (09:34 IST)
ಮೇಘಾಲಯದ ಶಿಲಾಂಗ್‌ನ ಐಐಎಂನಲ್ಲಿ ನಿನ್ನೆ ಸಂಜೆ ಉಪನ್ಯಾಸ ನೀಡುತ್ತಿದ್ದಾಗ ಕುಸಿದು ಬಿದ್ದು ಕೊನೆಯುಸಿರೆಳೆದ ಭಾರತದ ಹೆಮ್ಮೆಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ.
 
ಕಲಾಂ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ನಡೆಸಬೇಕೋ ಅಥವಾ ಅವರ ಹುಟ್ಟೂರಾದ ರಾಮೇಶ್ವರಂನಲ್ಲಿ ನಡೆಸುವುದೋ ಎಂಬುದೀಗ ಗೊಂದಲದ ಗೂಡಾಗಿದೆ. 
 
ಈ ಕುರಿತು ಕೇಂದ್ರ ಸರ್ಕಾರ ಆದೇಶ ನೀಡಿದಾಗಲಷ್ಟೇ ಅಂತ್ಯ ಸಂಸ್ಕಾರ ಎಲ್ಲಿ ನಡೆಸಲಾಗುತ್ತದೆ ಎಂಬುದು ಸ್ಪಷ್ಟಗೊಳ್ಳಲಿದೆ. ಈ ಕುರಿತು ನಿರ್ಧರಿಸಲು ಕೇಂದ್ರ ಸರ್ಕಾರ ಬೆಳಿಗ್ಗೆ 10.30ಕ್ಕೆ ತುರ್ತು ಸಂಪುಟ ಸಭೆಯನ್ನು ಕರೆದಿದೆ. 
 
ಅವರ ಹುಟ್ಟೂರು ತಮಿಳುನಾಡಿನ ರಾಮೇಶ್ವರಂಲ್ಲಿಯೇ ಅಂತ್ಯಸಂಸ್ಕಾರವನ್ನು ನಡೆಸುವ ಬಯಕೆ ಅವರ ಕುಟುಂಬ ವರ್ಗದ್ದಾಗಿದೆ. ಆದರೆ ಈ ಕುರಿತು ಇನ್ನೂ ನಿರ್ಧಾರವಾಗಿಲ್ಲವಾದ್ದರಿಂದ ಕುಟುಂಬ ಸದಸ್ಯರ್ಯಾರು ದೆಹಲಿಗೆ ತೆರಳಿಲ್ಲ.  
 
ಈ ಕುರಿತು ಮಾಧ್ಯಮದವರ ಜತೆ ಮಾತನಾಡುತ್ತಿದ್ದ  ಕಲಾಂ ಹಿರಿಯ ಸಹೋದರ ಮುತ್ತು ಮೀರಾ ಮರೈಕರ್ ಅಂತ್ಯಸಂಸ್ಕಾರದ ಕುರಿತಾಗಿ ನಮಗಿನ್ನೂ ಯಾರೂ ಸ್ಪಷ್ಟಪಡಿಸಿಲ್ಲ. ನಾವು ಈ ಕುರಿತು ಗೊಂದಲದಲ್ಲಿದ್ದೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada