Webdunia - Bharat's app for daily news and videos

Install App

ಜಮ್ಮು ಮತ್ತು ಕಾಶ್ಮೀರದಲ್ಲಿ 14 ಹೊಸ ಪ್ರವಾಸಿ ತಾಣಗಳ!

Webdunia
ಮಂಗಳವಾರ, 21 ಜೂನ್ 2016 (10:58 IST)
ಶ್ರೀನಗರ, ಪಹಲ್ಗಾಮ್, ಗುಲ್ಮಾರ್ಗ್ ಮತ್ತು ಕಾಶ್ಮೀರ ಕಣಿವೆಯ ಪ್ರವಾಸಿ ತಾಣಗಳು ವಿಶ್ವದ ಎಲ್ಲಾ ಭಾಗಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಸುಂದರ ತಾಣಗಳಿಗೆ ಭೇಟಿ ನೀಡಲು ವಿವಿಧ ಭಾಗದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಪ್ರವಾಸಿಗರ ಪ್ರವೃತ್ತಿಯನ್ನು ಅರ್ಥ ಮಾಡಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ್ ಸರಕಾರ, ರಾಜ್ಯದಲ್ಲಿ ಹೊಸ ಸ್ಥಳಗಳ ಪರಿಚಯ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುತ್ತಿದೆ. ಖಾಸಗಿ ವಾಹಿನಿಯ ವರದಿ ಪ್ರಕಾರ ಜಮ್ಮು ಮತ್ತು ಕಾಶ್ಮೀರ್ ಸರಕಾರ ರಾಜ್ಯದಲ್ಲಿ 14 ಹೊಸ ತಾಣಗಳನ್ನು ಅಭಿವೃದ್ಧಿಗೆ ಮುಂದಾಗಿದೆ ಎಂದು ತಿಳಿಸಿದೆ.
 
ಇತ್ತೀಚಿಗೆ ಸೇನೆ ತ್ಯಜಿಸಿರುವ ತೂಸಾ ಫೈರಿಂಗ್ ಮೈದಾನ ಪ್ರದೇಶ ಮತ್ತು ಉತ್ತರ ಕಾಶ್ಮೀರದ ಬಂಗಸ್ ವ್ಯಾಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸರಕಾರ ಈ ಸ್ಥಳಗಳನ್ನು ಕೇಂದ್ರೀಕರಿಸಲು ಹೊರಟಿದೆ.
 
ಈ ಎರಡು ಪ್ರವಾಸಿ ತಾಣಗಳನ್ನು ಪರಿಸರ ಸ್ನೇಹಿ ಸ್ಥಳಗಳಾಗಿ ಪರಿವರ್ತಿಸಲು ಸರಕಾರ ಶ್ರಮಿಸುತ್ತಿದ್ದು, ಈ ಸ್ಥಳಗಳನ್ನು ಪರಿಸರ ಸ್ನೀಹಿಯಾಗಿ ಪರಿವರ್ತಿಸಲು ಸ್ಥಳೀಯ ಜನರಪ ಪ್ರಮುಖ ಪಾತ್ರ ವಹಿಸಬೇಕಾಗಿರುವುದು ಅವಶ್ಯಕವಾಗಿದೆ.
 
ಮಾಧ್ಯಮಗಳ ವರದಿ ಪ್ರಕಾರ, ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಸರಕಾರ ಅನುದಾನವನ್ನು ಸಹ ನೀಡಲಿದೆ ಎಂದು ತಿಳಿಸಿದೆ.
 
ಸಿಂಥನ್, ಮಜ್ಮೂಹ್, ಆಪೆಲ್ ಟೌನ್ ಚಿನಿವುಡರ್, ದುಭಾಲ್, ಶ್ರುಂಜ್, ಮಂತಾಲೈ, ಬನಿ ಬಸೋಲಿ, ರಂಜೀತ್  ಸಾಗರ ಜಲಾಶಯ, ನೋರಿ ಚಾಂಬ್, ಏಳು ಸರೋವರ ರಾಜೌರಿ, ಬರ್ಜುಹಮಾ ಮತ್ತು ಖಾನ್ಮೊಹ್ ಪಾರ್ಕ್ ಪ್ರವಾಸಿ ಸ್ಥಳಗಳು ಶೀಘ್ರದಲ್ಲೇ ಪ್ರವಾಸಿ ನಕ್ಷೆಯಲ್ಲಿ ಸೇರಿಸಲಾಗುತ್ತಿದೆ. 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾನುವಾರ ನಮ್ಮ ಮೆಟ್ರೋ ವ್ಯತ್ಯಯ: ಯಾವ ಮಾರ್ಗದಲ್ಲಿ ಮೆಟ್ರೊ ಇಲ್ಲ ಇಲ್ಲಿದೆ ವಿವರ

ವಿಮಾನವನ್ನು ಕ್ರ್ಯಾಶ್ ಮಾಡುವುದಾಗಿ ವಿಮಾನದೊಳಗೆ ಬೆಂಗಳೂರು ವೈದ್ಯೆ ಚೀರಾಟ, ಹೊರಕಳುಹಿಸಿದ ಕ್ಯಾಬಿನ್ ಸಿಬ್ಬಂದಿ

Video: ಅಂಬೇಡ್ಕರ್ ಫೋಟೋ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಲಾಲೂ ಪ್ರಸಾದ್: ಮೋದಿ ವಾಗ್ದಾಳಿ

ಬಿಜೆಪಿ ಪಕ್ಷದೊಳಗಿನ ಅತೃಪ್ತಿ ಬಗ್ಗೆ ಮಾತನಾಡಿದ ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments