Select Your Language

Notifications

webdunia
webdunia
webdunia
webdunia

ಒಂದಾಗೋಣ ಬನ್ನಿ ಎಂದು ಶಾಸಕರಿಗೆ ಕರೆ ನೀಡಿದ ಪನೀರ್ ಸೆಲ್ವಂ

ಒಂದಾಗೋಣ ಬನ್ನಿ ಎಂದು ಶಾಸಕರಿಗೆ ಕರೆ ನೀಡಿದ ಪನೀರ್ ಸೆಲ್ವಂ
Chennai , ಮಂಗಳವಾರ, 14 ಫೆಬ್ರವರಿ 2017 (12:51 IST)
ಚೆನ್ನೈ: ಶಶಿಕಲಾ ನಟರಾಜನ್ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಹಂಗಾಮಿ ಮುಖ್ಯಮಂತ್ರಿ ಪನೀರ್ ಸೆಲ್ವಂ ತಮ್ಮ ಪಕ್ಷದ ಶಾಸಕರಿಗೆ ಒಂದಾಗಿ ಬನ್ನಿ. ಮತ್ತೆ ಅಮ್ಮ ಹಾಕಿಕೊಟ್ಟ ಹಾದಿಯಲ್ಲಿ ಆಡಳಿತ ನಡೆಸೋಣ ಎಂದು ಕರೆಕೊಟ್ಟಿದ್ದಾರೆ.

 
ಅಮ್ಮ ಎಲ್ಲರೂ ಒಂದಾಗಬೇಕೆಂದು ಬಯಸುತ್ತಿದ್ದರು. ಅಮ್ಮನ ಆತ್ಮ ನನ್ನಲ್ಲಿ ಜೀವಂತವಾಗಿದೆ. ಅವರ ಹಾದಿಯಲ್ಲಿ ಸಾಗೋಣ. ರಾಜ್ಯದ ಒಳಿತಿಗಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

ಆದರೆ ಶಶಿಕಲಾ ನಟರಾಜನ್ ಪನೀರ್ ಸೆಲ್ವಂರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದು, ಯಾವುದೇ ಕಾರಣಕ್ಕೂ ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ. ಇದರಿಂದ ಸೆಲ್ವಂ ಮುಖ್ಯಮಂತ್ರಿಯಾಗದಂತೆ ತಡೆಯುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಆದರೆ ಇದಕ್ಕೆ ಶಾಸಕರ ಅಂಕಿತ ಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಅಣ್ಣನ ಪುತ್ರ ದೀಪಕ್‌ ಜಯಕುಮಾರ್‌ಗೆ ಸಿಎಂ ಪಟ್ಟ?