Webdunia - Bharat's app for daily news and videos

Install App

ಚುನಾವಣೆ ಬರುವಾಗ ರಾಹುಲ್ ಗಾಂಧಿಗೆ ದೇವಾಲಯ ನೆನಪಾಗುತ್ತದೆ: ಸಿಎಂ ಯೋಗಿ ಟೀಕೆ

Webdunia
ಸೋಮವಾರ, 25 ಜೂನ್ 2018 (10:11 IST)
ನವದೆಹಲಿ: ಚುನಾವಣೆ ಹತ್ತಿರ ಬರುವಾಗ, ಪ್ರಚಾರದ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ಕೊಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಆಗ ಮಾತ್ರ ದೇವರ ನೆನಪಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕೆ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ‘ರಾಹುಲ್ ಗೆ ಚುನಾವಣೆ ಬಂದಾಗ ದೇವಾಲಯಗಳು ನೆನಪಾಗುತ್ತವೆ. ರಾಹುಲ್ ಸೇರಿದಂತೆ ಅವರ ನಾಲ್ಕು ತಲೆ ಮಾರು ಯಾವತ್ತೂ ಜನಿವಾರ ಹಾಕಿದವರಲ್ಲ. ಆದರೆ ಚುನಾವಣೆ ಬಂದಾಗ ರಾಹುಲ್ ಜನಿವಾರ ತೋರಿಸುತ್ತಾರೆ’ ಎಂದಿದ್ದಾರೆ.

ರಾಹುಲ್ ಯಾವತ್ತೂ ದೇವಾಲಯದ ಕಡೆಗೆ ಹೆಜ್ಜೆ ಹಾಕಿದವರಲ್ಲ. ಆದರೆ ಚುನಾವಣೆ ಬಂದಾಗ ಬರುತ್ತಾರೆ. ಯಾರೇ ಆದರೂ ಭಕ್ತಿ, ಭಾವದಿಂದ ದೇವಾಲಯಕ್ಕೆ ಬರಬೇಕೇ ಹೊರತು ಸೋಗು ಹಾಕಿಕೊಂಡು ಬರಬಾರದು ಎಂದು ಸಿಎಂ ಯೋಗಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments