ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಸಚಿವೆ ಸ್ವಾತಿ ಸಿಂಗ್ ಬಿಯರ್ ಬಾರ್ ಉದ್ಘಾಟಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಿಎಂ ಯೋಗಿ ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ವಿವರಣೆ ನೀಡುವಂತೆ ಸಿಎಂ ಯೋಗಿ ಸಚಿವೆಗೆ ನೋಟೀಸ್ ನೀಡಿದ್ದಾರೆ. ರಾಜ್ಯ ಮಹಿಳಾ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಲಕ್ನೋದಲ್ಲಿ ಬಾರ್ ಉದ್ಘಾಟಿಸುತ್ತಿರುವ ಫೋಟೋ ವೈರಲ್ ಆಗಿತ್ತು. ಅವರ ಜತೆಗೆ ಓರ್ವ ಐಪಿಎಸ್ ಅಧಿಕಾರಿ ಹಾಗೂ ಅವರ ಪತ್ನಿ ಕೂಡಾ ಇದ್ದರು.
ವಿಶೇಷವೆಂದರೆ, ಈ ಬಾರ್ ಗೆ ಸರಿಯಾದ ಪರವಾನಗಿ ಕೂಡಾ ಇಲ್ಲ ಎಂಬದು ಬೆಳಕಿಗೆ ಬಂದಿದೆ. ಇಂತಹ ಕಾರ್ಯಕ್ರಮಕ್ಕೆ ಸರ್ಕಾರದ ಸಚಿವರು ಹೋಗಿದ್ದು, ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಸಚಿವರು ಇದೀಗ ಸಿಎಂಗೆ ಉತ್ತರಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ