Webdunia - Bharat's app for daily news and videos

Install App

ದೆಹಲಿಯಲ್ಲಿ ಸಿಕ್ಕ ಗದ್ದುಗೆ ತಾನಾಗೇ ಕಳೆದುಕೊಂಡರಾ ಸಿಎಂ ಕೇಜ್ರಿವಾಲ್

ಕೃಷ್ಣವೇಣಿ. ಕೆ.
ಗುರುವಾರ, 27 ಏಪ್ರಿಲ್ 2017 (07:16 IST)
ನವದೆಹಲಿ: ಅರವಿಂದ್ ಕೇಜ್ರಿವಾಲ್.. 15 ವರ್ಷದಿಂದ ಕಾಂಗ್ರೆಸ್ ಆಡಳಿತ ನೋಡಿ ಬೇಸತ್ತಿದ್ದ ದೆಹಲಿ ಜನತೆಗೆ ಹೊಸ ಭರವಸೆ ನೀಡಿದ ನಾಯಕ. ಆದರೆ ಭರವಸೆ ಈಡೇರಿಸುವಲ್ಲಿ ಕೇಜ್ರಿವಾಲ್ ಸೋತು ಹೊದರಾ? ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನೋಡಿದ ಮೇಲೆ ಇಂತಹದ್ದೊಂದು ಅನುಮಾನ ಬರುತ್ತದೆ.

 
ರಾಜಕೀಯ ಬ್ಯಾಕ್ ಗ್ರೌಂಡ್ ಇಲ್ಲದಿದ್ದರೂ, ಸಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಂದು ಎಬ್ಬಿಸಿದ್ದ ಹೊಸ ಪರಿವರ್ತನೆಯ ಅಲೆಯಲ್ಲಿ ಲಾಭ ಪಡೆದುಕೊಂಡವರು ಕೇಜ್ರಿವಾಲ್. ಅವರಿಗೆ ಮೊದಲ ಬಾರಿಗೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವಾಗಲೂ ಮತದಾರನಿಗೆ ಅನುಮಾನವಿತ್ತು.

ಅದಕ್ಕೆ ಮೊದಲ ಬಾರಿಗೆ ಬಹುಮತ ಸಿಕ್ಕಿರಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ನಡೆಸಲಾರೆ ಎಂದ ಕೇಜ್ರಿವಾಲ್ ನೋಡಿ ದೆಹಲಿ ಜನತೆಗೆ ಅವರ ಮೇಲೆ ಅದೊಂಥರಾ ಅಭಿಮಾನ ಮೂಡಿತ್ತು. ಬಹುಮತ ಬಂದು ಕೇಜ್ರಿವಾಲ್ ಸಿಎಂ ಆದರು.

ಆದರೆ ಸಿಎಂ ಆದ ಮೇಲೆ ಅವರ ಭರವಸೆಗಳು ಇತರ ರಾಜಕೀಯ ಪಕ್ಷಗಳ ಭರವಸೆಗಿಂತ ಭಿನ್ನವಲ್ಲ ಎಂದು ಜನತೆಗೆ ಅರಿವಾಯಿತು. ಯಾವಾಗ ಬಿಜೆಪಿಯಲ್ಲಿ ನರೇಂದ್ರ ಮೋದಿ ಮೋಡಿ ಶುರುವಾಯಿತೋ, ಕೇಜ್ರಿವಾಲ್ ಹುಟ್ಟಿಸಿದ್ದ ಹೊಸ ಅಲೆ ಮಂಕಾಗಲು ಪ್ರಾರಂಭವಾಯಿತು.

ಆಗಿನಿಂದ ಪ್ರಧಾನಿ ಮೋದಿ ಜತೆ ಗುದ್ದಾಡಿಕೊಂಡೇ ಹೆಚ್ಚಿನ ಸಮಯ ಕಳೆದ ಕೇಜ್ರಿವಾಲ್ ತಮ್ಮ ಬುಡವನ್ನು ಮರೆತರು. ಹಾಗಾಗಿ ಪಕ್ಷದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಕೆಲವರು ಪಕ್ಷ ಬಿಟ್ಟರೆ, ಇನ್ನು ಕೆಲವರು ಟಿಕೆಟ್ ಹಂಚಿಕೆಯಲ್ಲಿನ ಅನ್ಯಾಯದ ಬಗ್ಗೆ ಧ್ವನಿಯೆತ್ತಿದರು. ಆದರೆ ಕೇಜ್ರಿವಾಲ್ ಇದ್ಯಾವುದಕ್ಕೂ ಕಿವಿಗೊಡದೇ ಇದ್ದಿದ್ದು, ಕೆಲವು ನಿಷ್ಠಾವಂತರ ಅಸಮಾಧಾನಕ್ಕೆ ಕಾರಣವಾಯಿತು.

ಇದರ ಪರಿಣಾಮವೇ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಪಂಜಾಬ್ ವಿಧಾನಸಭಾ ಚುನಾವಣೆ. ಎರಡೂ ಕಡೆ ಎಎಪಿ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಲ್ಲಿತ್ತು. ಆದರೆ ಭರವಸೆ ಹುಸಿಯಾಯಿತು. ಇದೀಗ ಕೇಜ್ರಿವಾಲ್ ನಾಯಕತ್ವದ ಮೇಲೆಯೇ ಪಕ್ಷದೊಳಗೇ ಅಸಮಾಧಾನ ಮೂಡುವಷ್ಟು ಹಳಸಿದೆ. ಆದಷ್ಟು ಬೇಗ ಕೇಜ್ರಿವಾಲ್ ಈ ಗಾಯಗಳಿಗೆ ತೇಪೆ ಹಚ್ಚಬೇಕಿದೆ. ಹೊಸ ಪರಿಣಾಮಕಾರಿ ನಾಯಕರನ್ನು ಹುಟ್ಟು ಹಾಕಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ವಿಮಾನ ದುರಂತ: ಮೃತ ನಾಲ್ವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಇವರೇ

ಕೇರಳದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ, ರೆಡ್‌ ಅಲರ್ಟ್ ಘೋಷಣೆ

NEET result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ವೀಕ್ಷಣೆ ಮಾಡಿ

ರಾಜ್ಯಕ್ಕೆ ಅನುದಾನ ಬೇಕಿದ್ದರೆ ಸಿಎಂ ಅವರೇ ಪ್ರಧಾನಿ ಜೊತೆ ಮಾತನಾಡಲಿ: ನಿಖಿಲ್ ಕುಮಾರಸ್ವಾಮಿ

Air India AirCrash: ಇನ್ಮುಂದೆ ವಿಮಾನ ಸಂಖ್ಯೆ 171 ಬಳಸದಿರಲು ನಿರ್ಧಾರ

ಮುಂದಿನ ಸುದ್ದಿ
Show comments