Select Your Language

Notifications

webdunia
webdunia
webdunia
webdunia

ರಾಜ್ಯದ ವಿಕಾಸಕ್ಕಾಗಿ ಅಬ್ದುಲ್ ಕಲಾಂ ಸಲಹೆ ಕೇಳಿದ ಅಖಿಲೇಶ್ ಯಾದವ್

ರಾಜ್ಯದ ವಿಕಾಸಕ್ಕಾಗಿ ಅಬ್ದುಲ್ ಕಲಾಂ ಸಲಹೆ ಕೇಳಿದ ಅಖಿಲೇಶ್ ಯಾದವ್
ಲಖನೌ , ಸೋಮವಾರ, 27 ಏಪ್ರಿಲ್ 2015 (11:32 IST)
ತ್ವರಿತಗತಿಯಲ್ಲಿ ರಾಜ್ಯದ ಅಭಿವೃದ್ಧಿ ಮಾಡುವ ಕನಸನ್ನು ಪ್ರಕಟಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಕುರಿತು ಸಲಹೆ ಸೂಚನೆ ನೀಡುವಂತೆ ಮಾಜಿ ರಾಷ್ಟ್ರಪತಿ, ದೇಶದ ಹೆಮ್ಮೆಯ ವಿಜ್ಞಾನಿ ಅಬ್ದುಲ್ ಕಲಾಮ್ ಅವರ ಸಲಹೆ ಕೇಳಿದ್ದಾರೆ. 

"ರಾಜ್ಯದ ಅಭಿವೃದ್ಧಿಗೆ ಸಹಾಯಕವಾಗುವಂತೆ ಸಲಹೆ ನೀಡಲು ನಿಮಗೆ ಸ್ವಾಗತಿಸುತ್ತೇವೆ. ನಿಮ್ಮ ಕಾರ್ಯಕ್ರಮದ ಬಗ್ಗೆ ದಯವಿಟ್ಟು ವಿವರ ನೀಡಿ," ಎಂದು ಯಾದವ್ ಕಲಾಂ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
 
ಉತ್ತರಪ್ರದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತಾವು ಆಸಕ್ತಿ ಹೊಂದಿರುವುದಾಗಿ ಕಲಾಂ, ಎಪ್ರಿಲ್ 10 ರಂದು ಉತ್ತರಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಪತ್ರದಲ್ಲವರು ಅನೇಕ ಬಹುಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. 
 
ಉತ್ತರಪ್ರದೇಶದಲ್ಲಿ ಬಡವರ ವಿಕಾಶಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು  ಈ ದಿಶೆಯಲ್ಲಿ ಮತ್ತಷ್ಟು ಹೆಜ್ಜೆಗಳನ್ನು ಇಡಲಾಗುವುದು ಎಂದು ಯಾದವ್ ತಿಳಿಸಿದ್ದಾರೆ. 

Share this Story:

Follow Webdunia kannada