Webdunia - Bharat's app for daily news and videos

Install App

ನದಿಯಲ್ಲಿ ಈಜಿ ಶಾಲೆ ತಲುಪುವ ಮಕ್ಕಳು : ಗುಜರಾತ್ ಸರ್ಕಾರಕ್ಕೆ ನೋಟಿಸ್

Webdunia
ಬುಧವಾರ, 20 ಆಗಸ್ಟ್ 2014 (18:20 IST)
ಸುಮಾರು 100 ಮಕ್ಕಳು ಶಾಲೆಯನ್ನು ತಲುಪಲು ನದಿಯಲ್ಲಿ ಈಜುತ್ತಿರುವಂತಹ ಪರಿಸ್ಥಿತಿ ಏಕೆಂದು ವಿವರಣೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಸೂಚಿಸಿದೆ. ಮಕ್ಕಳ ಶಿಕ್ಷಣ ಹಕ್ಕು ಮತ್ತು ಸುರಕ್ಷತೆಗೆ ಉಲ್ಲಂಘನೆಯಾಗಿದೆ ಎಂದು ಮಾಧ್ಯಮದಲ್ಲಿ ಬಂದಿರುವ ವರದಿಗಳನ್ನು ಕುರಿತು ಮಾನವ ಹಕ್ಕು ಆಯೋಗ ಪ್ರತಿಕ್ರಿಯಿಸಿದೆ.

ಗುಜರಾತಿನ ಬುಡಕಟ್ಟು ಗ್ರಾಮಗಳ ಸಮೂಹಕ್ಕೆ ಸೇರಿದ ಶಾಲಾ ಮಕ್ಕಳು ಹಿತ್ತಾಳೆ ಮಡಕೆಗಳನ್ನು ಕೈಯಲ್ಲಿ ಆಧಾರವಾಗಿ ಹಿಡಿದುಕೊಂಡು ನದಿಯಲ್ಲಿ ಈಜಿ ಇನ್ನೊಂದು ದಡ ಸೇರುತ್ತಿದ್ದರು. ರಸ್ತೆಯ ಮೂಲಕ ಹೋಗುವುದಾದರೆ ಚೋಟಾ ಉಡೇಪುರ ಜಿಲ್ಲೆಯ ಶಾಲೆ ತಲುಪಲು 20 ಕಿಮೀ ಹಿಡಿಯುತ್ತದೆ. ಹೀಗಾಗಿ ನದಿಗೆ ಸೇತುವೆ ಇಲ್ಲದಿರುವುದರಿಂದ ಮಕ್ಕಳು ಈಜಿ ದಡ ಸೇರುತ್ತಾರೆ. 

ಪೋಷಕರು ಮಕ್ಕಳು ನದಿಯಲ್ಲಿ ಈಜುವುದರ ಉಸ್ತುವಾರಿಯನ್ನು ಸರದಿಯಂತೆ ವಹಿಸುತ್ತಿದ್ದರು. ಗ್ರಾಮಸ್ಥರು ನದಿಗೆ ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಆ ಕಡೆ ಗಮನಹರಿಸದೇ ಕಣ್ಣುಮುಚ್ಚಿಕೊಂಡು ಕುಳಿತಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments