Webdunia - Bharat's app for daily news and videos

Install App

2ಜಿ ಹಗರಣ: ಎ.ರಾಜಾ, ಕನ್ನಿಮೋಳಿ ವಿರುದ್ಧ ವಿಶೇಷ ಕೋರ್ಟ್ ದೋಷಾರೋಪ

Webdunia
ಶುಕ್ರವಾರ, 31 ಅಕ್ಟೋಬರ್ 2014 (11:57 IST)
ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಎಂಪಿ ಕನ್ನಿಮೋಳಿ, ಕರುಣಾನಿಧಿ ಪತ್ನಿ ದಯಾಳು ಅಮ್ಮಲ್ ಮತ್ತಿತರರ ವಿರುದ್ಧ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ದೋಷಾರೋಪ ಹೊರಿಸಿದೆ. ಜಾರಿ ನಿರ್ದೇಶನಾಲಯವು 10 ವ್ಯಕ್ತಿಗಳು ಮತ್ತು 9 ಕಂಪನಿಗಳು ಸೇರಿದಂತೆ 19 ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
 
ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ಆರೋಪಿಗಳು 200 ಕೋಟಿ ರೂ. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಹಣದ ವಹಿವಾಟು ನೈಜತೆಯಿಂದ ಕೂಡಿಲ್ಲ.  ಡಿಬಿ ಗ್ರೂಪ್ ಕಂಪೆನಿಗಳಿಗೆ ರಾಜಾ ಅವರು ಟೆಲಿಕಾಂ ಪರವಾನಗಿ ನೀಡಿದ್ದಕ್ಕಾಗಿ ಕೊಟ್ಟ ಲಂಚದ ಹಣವಾಗಿತ್ತು ಎಂದು ಆರೋಪಿಸಿದೆ. 
 
ಡಿಬಿ ಗ್ರೂಪ್ ಕಂಪನಿಯಿಂದ ಡಿಎಂಕೆ ಸಾರಥ್ಯದ ಕಲೈಗ್‌ನಾರ್ ಟಿವಿಗೆ ಕುಸೇಗಾಂವ್ ಫ್ರೂಟ್ಸ್ ಮತ್ತು ವೆಜಿಟೇಬಲ್ಸ್ ಪ್ರೈ. ಲಿ. ಮತ್ತು ಸಿನೆಯುಗ್ ಫಿಲ್ಮ್ಸ್ ಲಿ. ಮೂಲಕ 200 ಕೋಟಿ ರೂ. ವರ್ಗಾವಣೆಗೆ ಸಂಬಂಧಿಸಿದ ವಹಿವಾಟುಗಳ ಸರಣಿ ನೈಜವಾದ ವ್ಯವಹಾರದ ವಹಿವಾಟು ಆಗಿರಲಿಲ್ಲ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
 
ಆದರೆ ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯದ ಆರೋಪಗಳಿಗೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.
 
  2ಜಿ ತರಂಗಾಂತರ ಹಗರಣ ದೇಶದಲ್ಲೇ ಸಂಚಲನ ಮೂಡಿಸಿದ್ದು, ಯುಪಿಎ ಸರ್ಕಾರಕ್ಕೆ ದೊಡ್ಡ ಆಘಾತ ನೀಡಿತ್ತು. ಎ.ರಾಜಾ ಮತ್ತು ಕನ್ನಿಮೋಳಿ ತಪ್ಪಿತಸ್ಥರೆಂದು ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments